ಚಂದ್ರನಗರ: ಸೌಹಾರ್ದ ಈದ್‍ಕೂಟ

Update: 2021-07-23 17:13 GMT

ಕಾಪು : ಸಮಾಜ ಸೇವಾ ವೇದಿಕೆ ಕಳತ್ತೂರು-ಕಾಪು ಸಹಯೋಗದಲ್ಲಿ ಸಫಿಯ ಉಮ್ಮರಬ್ಬ ಫ್ಯಾಮಿಲಿ ಟ್ರಸ್ಟ್ ಚಂದ್ರನಗರ ವತಿಯಿಂದ ಗುರುವಾರ ಸೌಹಾರ್ದ ಕೂಟ ಈದ್ ಆಚರಣೆ ಯು.ಎಸ್.ಎಫ್ ಕಾಂಪ್ಲೆಕ್ಸ್ ಚಂದ್ರನಗರದಲ್ಲಿ ನಡೆಯಿತು.

ಸಮಾಜ ಸೇವಾ ವೇದಿಕೆ ಅಧ್ಯಕ್ಷ ಮೊಹಮ್ಮದ್ ಫಾರೂಕ್ ಚಂದ್ರನಗರ ಮಾತನಾಡಿ, ಸಮಾಜದಲ್ಲಿ ಎಲ್ಲಾ ಜನರು ಶಾಂತಿ ಯಿಂದ ಬದುಕಬೇಕಾದರೆ ಸೌಹಾರ್ದತೆಯು ಅತಿ ಅಗತ್ಯ. ನಾವು ಭಾರತೀಯರು ನಮ್ಮ ನೆಲ ಜಲ ನಮ್ಮ ದೇಶಕ್ಕಾಗಿ ಎಲ್ಲರು ಒಗ್ಗಟ್ಟಾಗಿ ಸಹೋದರತೆಯಿಂದ ಹೋರಾಡಿದರೆ ನಮ್ಮ ಭಾರತ ದೇಶ ಎಲ್ಲಾ ರಂಗದಲ್ಲೂ ಉತ್ತುಂಗಕ್ಕೆಯೆರುದರಲ್ಲಿ ಅನುಮಾನ ಇಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸುಮಾರು 150ಕ್ಕೂ ಮಿಕ್ಕಿ ಜನರಿಗೆ ಆಹಾರದ ಕಿಟ್‍ನ್ನು ನೀಡಲಾಯಿತು. ವೇದಿಕೆ ಸಂಚಾಲಕರಾದ ದಿವಾಕರ ಡಿ ಶೆಟ್ಟಿ ಕಳತ್ತೂರು, ಗೌರವ ಅಧ್ಯಕ್ಷ ದಿವಾಕರ ಬಿ ಶೆಟ್ಟಿ ಕಳತ್ತೂರು, ಗೌರವ ಸಲಹೆಗರಾರದ ದಯಾನಂದ ಕೆ ಶೆಟ್ಟಿ ದೆಂದೂರು, ಉಪಾಧ್ಯಕ್ಷರಾದ ರಾಜೇಶ್ ಕುಲಾಲ್ ಕುತ್ಯಾರು, ಸಫಿಯ ಉಮ್ಮರಬ್ಬ ಫ್ಯಾಮಿಲಿ ಟ್ರಸ್ಟ್‍ನ ಸ್ಥಾಪಕ ಅಧ್ಯಕ್ಷ ಕೆ.ಉಮ್ಮರಬ್ಬ ಚಂದ್ರನಗರ, ಕಾಪು ಪ್ರೆಸ್ ಕ್ಲಬ್ ಅಧ್ಯಕ್ಷ ರಾಕೇಶ್ ಕುಂಜೂರು, ಸಿ.ಆರ್ ಪ್ರಾಪರ್ಟಿಸ್ ಮಾಲಕರಾದ ಸಂತೋಷ್ ಆಚಾರ್ಯ ಶಿರ್ವ, ಉದ್ಯಮಿ ದಿನೇಶ್ ಆಚಾರ್ಯ ಶಿರ್ವ, ಬಿ.ಎ ಫಕ್ರುದ್ದಿನ್ ಅಲಿ ಚಂದ್ರನಗರ, ಸಾಹಿಲ್ ಸಾದಿಕ್ ಕಾಪು, ಮೆಸ್ಕಾಂ ಪವರ್ ಮ್ಯಾನ್ ಸಿದ್ದು, ಪುರೊಷೋತ್ತಮ್ ಸಾಲಿಯಾನ್ ಕಾಪು ಸಂತೋಷ್ ಕಾಪು ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News