​ಬೆಂಗಳೂರಿಗೆ ಹೊರಟ ತಾಯಿ, ಮಕ್ಕಳು ನಾಪತ್ತೆ

Update: 2021-07-23 17:34 GMT

ಮಂಗಳೂರು, ಜು.23: ಬೆಂಗಳೂರಿಗೆಂದು ಹೊರಟು ಬಂದಿದ್ದ ಪತ್ನಿ ಹಾಗೂ ಮೂವರು ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಬಿಹಾರ ಮೂಲದ ನೀರಜ್ ಚೌಧುರಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪಚ್ಚನಾಡಿಯಲ್ಲಿ ಕಳೆದ 10 ವರ್ಷದಿಂದ ಕೆಲಸ ಮಾಡುಕೊಂಡಿದ್ದು, ಅಲ್ಲೇ ಪತ್ನಿ ಸುಭದ್ರಾ ದೇವಿ (32), ಮಕ್ಕಳಾದ ಪೂನಂ ಚೌಧುರಿ (12), ತೃಪ್ತಿ ಚೌಧುರಿ (10) ಮತ್ತು ಕೀರ್ತಿ (8) ಎಂಬವರೊಂದಿಗೆ ನೀರಜ್ ಚೌಧುರಿ ವಾಸವಾಗಿದ್ದರು.

ತನ್ನ ಅಣ್ಣ ಸಂತೋಷ್ ಚೌಧುರಿ ಬೆಂಗಳೂರಿನಲ್ಲಿ ಸುಮಾರು 2 ತಿಂಗಳ ಹಿಂದೆ ಮೃತಪಟ್ಟಿದ್ದು, ಆತನ ಅಂತ್ಯಸಂಸ್ಕಾರಕ್ಕೆಂದು ತಾನು ಬೆಂಗಳೂರಿಗೆ ಹೋದವನು ಅಲ್ಲೇ ಇದ್ದೆ. ಜು.14ರಂದು ಬೆಳಗ್ಗೆ ಸುಮಾರು 11 ಗಂಟೆಗೆ ಪತ್ನಿ ಸುಭದ್ರಾದೇವಿ ನನಗೆ ಕರೆ ಮಾಡಿ ತಾನು ಮತ್ತು ಮಕ್ಕಳು ಬೆಂಗಳೂರಿಗೆ ಬರುತ್ತಿದ್ದೇವೆ ಎಂದು ಹೇಳಿ ಮಂಗಳೂರಿನಿಂದ ಹೊರಟವರು, ಬೆಂಗಳೂರಿಗೆ ಬಾರದೇ, ಊರಿಗೂ ಹೋಗದೆ ಕಾಣೆಯಾಗಿದ್ದಾರೆ. ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿದೆ. ಕಾಣೆಯಾದ ಪತ್ನಿ ಮತ್ತು ಮಕ್ಕಳನ್ನು ಪತ್ತೆ ಮಾಡಿಕೊಡಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News