ಆಸ್ಕರ್ ಫೆರ್ನಾಂಡಿಸ್ ಗುಣಮುಖರಾಗಲು ವಿಶೇಷ ಪ್ರಾರ್ಥನೆ

Update: 2021-07-24 14:55 GMT

ಕುಂದಾಪುರ : ರಾಜ್ಯಸಭಾ ಸದಸ್ಯ ಓಸ್ಕರ್ ಫೆರ್ನಾಂಡಿಸ್ ಶೀಘ್ರ ಗುಣಮುಖರಾಗುವಂತೆ ಕುಂದಾಪುರದ ಹೋಲಿ ರೋಜರಿ ಚರ್ಚ್‌ನಲ್ಲಿ ಇಂದು ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು.

ಧರ್ಮಗುರುಗಳಾದ ಅತಿವಂದನೀಯ ಸ್ಟ್ಯಾನಿ ತಾವ್ರೂ ಪ್ರಾರ್ಥನೆ ವಿಧಿಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜಾಕೋಬ್ ಡಿಸೋಜ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ, ನ್ಯಾಯವಾದಿ ಶಾಲೇಟ್ ರೆಬೆಲ್ಲೋ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಆಶಾ ಕರ್ವಾಲೋ, ಗ್ರಾಪಂ ಸದಸ್ಯರಾದ ಸ್ಟೀವನ ಡಿಕೋಸ್ಟಾ , ರೋಷನ್ ಬರೆಟ್ಟೋ, ಶೈನಿ ಕ್ರಾಸ್ತಾ, ಜೆರಾಲ್ಡ್ ಕ್ರಾಸ್ತಾ, ಸುವರ್ಣ ಅಲ್ಮೇಡ, ನಿತಿನ್ ಡಿಸೋಜ, ಎಡೊಲ್ಪ್ಡಿಕೋಸ್ಟಾ, ಪ್ರಮೆಸ್ತ್ ಕರ್ವಾಲೋ, ಡೆನಿಸ್ ಕೋತಾ, ರೋಶನ್ ಡಿಸೋಜ, ಸಂತೋಷ ಬರೆಟ್ಟೂ, ಜೇಮ್ಸ್ ಕ್ರಾಸ್ತಾ, ಅಂತೋನಿ ಅಲ್ಮೆಡ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News