ಅಪರಿಚಿತರ ತಂಡದಿಂದ ಹಲ್ಲೆ: ದೂರು

Update: 2021-07-24 16:19 GMT

ಕಾಪು, ಜು.24: ಸ್ಕೂಟರ್‌ನಲ್ಲಿ ಬರುತ್ತಿದ್ದ ಓರ್ವನಿಗೆ ಅಪರಿಚಿತ ವ್ಯಕ್ತಿಗಳ ತಂಡ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಜು.23ರಂದು ರಾತ್ರಿ 10ಗಂಟೆ ಸುಮಾರಿಗೆ ಕೊಪ್ಪಲಂಗಡಿ ಕಮ್ಯೂನಿಟಿ ಹಾಲ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

ಕೊಪ್ಪಲಂಗಡಿಯ ಬಾಡಿಗೆ ಮನೆ ನಿವಾಸಿ ಅಬ್ದುಲ್ ರಹೀಮ್(46) ಎಂಬವರು ಮೂಳೂರುನಿಂದ ಕೊಪ್ಪಲಂಗಡಿ ಕಡೆಗೆ ಸ್ಕೂಟರ್‌ನಲ್ಲಿ ಅಬ್ದುಲ್ ಅಝೀಝ್ ಜೊತೆ ಸಹಸವಾರರಾಗಿ ಬರುತ್ತಿದ್ದರು. ಈ ಮಧ್ಯೆ ನಿಂತಿದ್ದ ರಿಡ್ಜ್ ಕಾರಿನಲ್ಲಿದ್ದ ಮಾಸ್ಕ್ ಧರಿಸಿದ್ದ ಐವರು ಸ್ಕೂಟರನ್ನು ತಡೆದರೆನ್ನ ಲಾಗಿದೆ. ಬಳಿಕ ಅವರು ರಹೀಮ್‌ಗೆ ಬಿದರಿ ಕೋಲಿನಿಂದ ಮುಖಕ್ಕೆ ಹೊಡೆದು ಕಾಲಿನಿಂದ ತುಳಿದು ಹಲ್ಲೆ ನಡೆಸಿ ಪರಾರಿಯಾದರು ಎಂದು ದೂರಲಾಗಿದೆ. ಗಾಯಗೊಂಡ ರಹೀಮ್ ಜಿಲ್ಲಾ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News