ಮಂಜನಾಡಿ: ಕೆಸಿಎಫ್ ಯುಎಇ ಕಾರ್ಯಕರ್ತರ ಸ್ನೇಹ ಸಮ್ಮಿಲನ

Update: 2021-07-25 09:15 GMT

ಮಂಜನಾಡಿ: ಕೆಸಿಎಫ್ ಯುಎಇ ಕಾರ್ಯಕರ್ತರ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಮಂಜನಾಡಿಯ ಅಲ್ ಮದೀನಾ ಇಸ್ಲಾಮಿಕ್ ಯಾತೀಮ್ ಖಾನದಲ್ಲಿ ಶುಕ್ರವಾರ ನಡೆಯಿತು.

ಕಾರ್ಯಕ್ರಮ ಮರ್ಹೂಮ್ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರ ಖಬರ್ ಝಿಯಾರತಿನೊಂದಿಗೆ ಆರಂಭಗೊಂಡಿತು. ಅಲ್ ಮದೀನಾ ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಝಿಯಾರತಿಗೆ ನೇತೃತ್ವ ನೀಡಿದರು.

ಕಾರ್ಯಕ್ರಮದಲ್ಲಿ ಕೆಸಿಎಫ್ ದುಬೈ ನಾರ್ತ್ ಮಾಜಿ ಅಧ್ಯಕ್ಷ ಅಬ್ದುಲ್ಲ ಉಸ್ತಾದ್ ಕುಡ್ತಮುಗೇರು ದುಆ ನೆರವರಿಸಿದರು. ಅಧ್ಯಕ್ಷತೆಯನ್ನು ಕೆಸಿಎಫ್ ಯುಎಇ ರಾಷ್ಟ್ರಿಯ ಸಮಿತಿ ಕೋಶಾಧಿಕಾರಿ ಇಬ್ರಾಹಿಂ ಬ್ರೈಟ್ ಮಾರ್ಬಲ್ ವಹಿಸಿದ್ದರು. ಉದ್ಘಾಟನೆಯನ್ನು ಕೆಸಿಎಫ್ ಅಂತರ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಶೇಖ್ ಬಾವ ಹಾಜಿ ಮಂಗಳೂರು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಕೆಸಿಎಫ್ ದುಬೈ ಮಾಜಿ ಅಧ್ಯಕ್ಷ ಮೆಹಬೂಬ್ ರಹ್ಮಾನ್ ಸಖಾಫಿ ಕಿನ್ಯ ಮುಖ್ಯ ಭಾಷಣ ಮಾಡಿದರು. ಅಲ್ ಮದೀನಾ ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ, ಕೆಸಿಎಫ್ ಯುಎಇ ರಾಷ್ಟ್ರಿಯ ಸಮಿತಿ ಇಹ್ಶಾನ್ ವಿಭಾಗ ಅಧ್ಯಕ್ಷ ಅಬ್ದುಲ್ ಖಾದರ್ ಸಅದಿ ಸುಳ್ಯ, ಹುಸೈನ್ ಹಾಜಿ ಕಿನ್ಯ, ಇಬ್ರಾಹಿಂ ಹಾಜಿ ಕೊಲ್ನಾಡು, ನಝೀರ್ ಹಾಜಿ ಕೆಮ್ಮಾರ, ಇಬ್ರಾಹಿಂ ಹಾಜಿ ಕಿನ್ಯ ಶುಭಹಾರೈಸಿದರು.

ಅಬೂಸ್ವಾಲಿಹ್ ಸಖಾಫಿ ಶಾರ್ಜ, ಇಸ್ಮಾಯಿಲ್ ಮದನಿ ನಗರ, ಅಕ್ರಂ ಬಿಸಿರೋಡ್, ಹನೀಫ್ ಬಸರಾ ಉಪಸ್ಥಿತರಿದ್ದರು. ಕೆಸಿಎಫ್ ಯುಎಇ ರಾಷ್ಟ್ರಿರ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಖಲಂದರ್ ಕಬಕ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News