ಖಾಝಿ ಸಯ್ಯಿದ್ ಉಮರುಲ್ ಫಾರೂಖ್ ಅಲ್ ಬುಖಾರಿ 6ನೇ ಉರೂಸ್ ಸಮಾರೋಪ
Update: 2021-07-25 17:47 GMT
ಮಂಜೇಶ್ವರ : ಖಾಝಿ ಸಯ್ಯಿದ್ ಮುಹಮ್ಮದ್ ಉಮರುಲ್ ಫಾರೂಖ್ ಅಲ್ ಬುಖಾರಿ 6 ನೇ ಉರೂಸಿಗೆ ಮಳ್ ಹರ್ ನಲ್ಲಿ ಸಮಾರೋಪಗೊಂಡಿತು.
ರವಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ಅನುಸ್ಮರಣಾ ಪ್ರಭಾಷಣೆ ಡಾ. ಮುಹಮ್ಮದ್ ಫಾರೂಖ್ ನಈಮಿ ಕೊಲ್ಲಂ, ಅರಿವಿನ್ ನಿಲಾವ್ ಆತ್ಮೀಯ ಸಂಗಮದಲ್ಲಿ ಸಫ್ವಾನ್ ಸಖಾಫಿ ಪತ್ತಪ್ಪಿರಿಯಂ ಪ್ರಭಾಷಣೆ ಮಾಡಿದರು.
ಸಯ್ಯಿದ್ ಅಬ್ದುರ್ರಹ್ಮಾನ್ ಶಹೀರ್ ಅಲ್ ಬುಖಾರಿ ಸಮಾಪನಾ ಪ್ರಾರ್ಥನೆ ಮಾಡಿದರು. ಸಯ್ಯಿದ್ ಜಲಾಲುದ್ದೀನ್ ಸಅದಿ ಅಲ್ ಬುಖಾರಿ, ಸ್ವಾಲಿಹ್ ಸಅದಿ ತಲಿಪ್ಪರಂಬು, ಸಯ್ಯಿದ್ ಮುಸ್ತಫಾ ಸಿದ್ದೀಖಿ, ಹಸನ್ ಸಅದಿ, ಸಿದ್ದೀಖ್ ಸಅದಿ ತೌಡುಗೋಳಿ, ಝುಬೈರ್ ಸಖಾಫಿ, ಹಸನ್ ಕುಂಞಿ ಮಳ್ ಹರ್, ಆರಿಸ್ ಹಾಜಿ, ಉಮರ್ ಹಾಜಿ, ಪಳ್ಳಿಕುಂಞಿ ಹಾಜಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.