ಮಂಜೇಶ್ವರ : ಕಾವಲುಗಾರನನ್ನು ಕಟ್ಟಿ ಹಾಕಿ ಜುವೆಲ್ಲರಿಯಿಂದ 15 ಕೆಜಿ ಬೆಳ್ಳಿ, ನಗದು ದರೋಡೆ
Update: 2021-07-26 05:40 GMT
ಮಂಜೇಶ್ವರ : ಕಾವಲುಗಾರನನ್ನು ಕಟ್ಟಿ ಹಾಕಿ ಜುವೆಲ್ಲರಿಯಿಂದ ಸುಮಾರು 15ಕೆಜಿ ಬೆಳ್ಳಿ ಆಭರಣ ಹಾಗೂ 4 ಲಕ್ಷ ರೂ. ನಗದು ದರೋಡೆ ಮಾಡಿದ ಘಟನೆ ಸೋಮವಾರ ಮುಂಜಾನೆ ಮಂಜೇಶ್ವರದ ಹೊಸಂಗಡಿಯಲ್ಲಿ ನಡೆದಿದೆ.
ದರೋಡೆಕೋರರ ಹಲ್ಲೆಯಿಂದ ಗಂಭೀರ ಗಾಯಗೊಂಡ ಕಾವಲುಗಾರ ಅಬ್ದುಲ್ಲಾ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳವನ್ನು ತನಿಖಾಧಿಕಾರಿಗಳು ಪರಿಶೀಲನೆ ನಡೆಸಿದ್ದು, ಇಂದು ಮುಂಜಾನೆ 3 ಗಂಟೆಯ ಸುಮಾರಿಗೆ ನಡೆದಿರುವುದಾಗಿ ತಿಳಿಸಿದ್ದಾರೆ.