ಮಲ್ಲೂರು ಗುಡ್ಡ ಕುಸಿತ: 5 ಲಕ್ಷ ರೂ. ಪರಿಹಾರಕ್ಕೆ ತಹಶೀಲ್ದಾರ್ ಶಿಫಾರಸು

Update: 2021-07-26 15:18 GMT

ಮಂಗಳೂರು, ಜು.26: ನಗರದ ಹೊರವಲಯದ ಮಲ್ಲೂರಿನಲ್ಲಿ ಗುಡ್ಡ ಕುಸಿತದ ಪರಿಣಾಮ ಮನೆಗೆ ಹಾನಿಯಾಗಿ, ಮಹಿಳೆ ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತ ಝುಬೈರ್ ಅವರಿಗೆ ರಾಜೀವ್‌ಗಾಂಧಿ ನಿಗಮದಿಂದ ಐದು ಲಕ್ಷ ರೂ. ಪರಿಹಾರ ನೀಡುವಂತೆ ಪಂಚಾಯತ್ ಮೂಲಕ ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ಶಿಫಾರಸು ಮಾಡಿದ್ದಾರೆ.

ಅಲ್ಲದೆ, ಎನ್‌ಡಿಆರ್‌ಎಫ್ ನಿಧಿಯಿಂದ 95,100 ರೂ. ಪರಿಹಾರ ದೊರೆಯಲಿದೆ. ಈ ಪೈಕಿ ತಕ್ಷಣವೇ 5,200 ರೂ. ಸಂತ್ರಸ್ತನ ಖಾತೆಗೆ ಜಮೆ ಯಾಗಲಿದೆ ಎಂದು ತಹಶೀಲ್ದಾರ್ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಸದಸ್ಯ ಅಬ್ದುಲ್ಲಾ ಬೊಲ್ಲಂಕಿಣಿ, ಗ್ರಾಪಂ ಕರಣಿಕ ಮೆಹಬೂಬ್, ಸಾಮಾಜಿಕ ಕಾರ್ಯಕರ್ತ ಹನೀಫ್ ಮಲ್ಲೂರು, ಪತ್ರಕರ್ತ ಜಬ್ಬಾರ್ ಮಲ್ಲೂರು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News