ಬೈಂದೂರು: ಹೊಳೆಗೆ ಬಿದ್ದು ಎರಡು ವರ್ಷ ಮಗು ಮೃತ್ಯು

Update: 2021-07-27 18:49 GMT

ಬೈಂದೂರು, ಜು.27: ಮಗುವೊಂದು ಮನೆ ಸಮೀಪದ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಉಪ್ಪುಂದ ಗ್ರಾಮದ ಕರ್ಕಿಕಳಿ ಎಂಬಲ್ಲಿ ಜು.26ರಂದು ಸಂಜೆ ವೇಳೆ ನಡೆದಿದೆ.

ಕರ್ಕಿಕಳಿಯ ವಿಶ್ವನಾಥ ಖಾರ್ವಿ ಎಂಬವರ ಮಗ ಸರ್ವದ(2 ವರ್ಷ) ಮೃತ ದುದೈರ್ವಿ. ಇವರು ಮನೆಯ ಕೋಣೆಯಲ್ಲಿ ಮಗುವನ್ನು ಮಲಗಿಸಿ ಉಪ್ಪುಂದ ಪೇಟೆಗೆ ಹೋಗಿದ್ದು, ಮಧ್ಯಾಹ್ನ 3:30ರಿಂದ ಸಂಜೆ 4 ಗಂಟೆ ಮಧ್ಯಾವಧಿಯಲ್ಲಿ ಮಗು ಎದ್ದು ಮನೆಯಿಂದ ಹೊರಗೆ ಬಂದಿತ್ತೆನ್ನಲಾಗಿದೆ.

ಮಗು ಮನೆಯ ಸಮೀಪ ಹರಿಯುವ ಎಡಮಾವಿನ ಹೊಳೆಯ ದಡದಲ್ಲಿ ನಡೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿತ್ತು ಎಂದು ತಿಳಿದು ಬಂದಿದೆ. ಮೃತದೇಹವು ಉಪ್ಪುಂದ-ಕರ್ಕಿಕಳಿ ಬ್ರೇಕ್ ವಾಟರ್ ಸಮೀಪ ನೀರಿನಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News