ಜೆ.ವಿ. ಸನ್ಸ್ ಸಂಸ್ಥೆಯ ಸ್ಥಾಪಕ ಜೆ.ವಿ.ಸೀತಾರಾಮ್ ನಿಧನ

Update: 2021-07-28 14:37 GMT

ಮಂಗಳೂರು, ಜು.28: ಉದ್ಯಮಿ, ಜೆ.ವಿ. ಸನ್ಸ್ ಸಂಸ್ಥೆಯ ಸ್ಥಾಪಕ, ಗೋಕರ್ಣನಾಥ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಜೆ.ವಿ.ಸೀತಾರಾಮ್(93) ವಯೋಸಹಜ ಅನಾರೋಗ್ಯದಿಂದ ಬುಧವಾರ ನಿಧನರಾಗಿದ್ದಾರೆ.

ಮೃತರು ಪುತ್ರ, ಪುತ್ರಿ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು‌ ಸಂಜೆ 4 ಗಂಟೆಗೆ ನಂದಿಗುಡ್ಡೆ ಸ್ಮಶಾನದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಯಶಸ್ವಿ ಉದ್ಯಮಿ, ಹಲವಾರು ವಿದ್ಯಾಸಂಸ್ಥೆ, ಧಾರ್ಮಿಕ ಕೇಂದ್ರಗಳ ಏಳಿಗೆಗೆ ಶ್ರಮಿಸಿದ ಜೆ.ವಿ.ಸೀತಾರಾಮ್ ಅವರು ಬಿಲ್ಲವ ಸಮಾಜದ ಮುಖಂಡರಾಗಿ ಗುರುತಿಸಿಕೊಂಡಿದ್ದರು. ಗೋಕರ್ಣನಾಥ ಬ್ಯಾಂಕಿನ ಮಾಜಿ ಅಧ್ಯಕ್ಷರಾಗಿ, ವಿಜಯ ಬ್ಯಾಂಕಿನ ಮಾಜಿ ನಿರ್ದೇಶಕರೂ ಆಗಿ ಕಾರ್ಯನಿರ್ವಹಿಸಿದ್ದರು.

ದ.ಕ. ಜಿಲ್ಲಾ ಕಾಂಗ್ರೆಸ್ ಸಂತಾಪ:

ಜೆ.ವಿ.ಸೀತಾರಾಂ ನಿಧನಕ್ಕೆ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಕೆ.ಹರೀಶ್ ಕುಮಾರ್, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ, ಮಾಜಿ ಸಚಿವರಾದ ಬಿ.ರಮಾನಾಥ ರೈ, ಕೆ.ಅಭಯಚಂದ್ರ ಜೈನ್, ಶಾಸಕ ಯು.ಟಿ.ಖಾದರ್, ಮಾಜಿ ಸಂಸದ ಬಿ.ಇಬ್ರಾಹೀಂ, ಮಾಜಿ ಶಾಸಕರಾದ ಮುಹಮ್ಮದ್ ಮಸೂದ್, ವಿಜಯ್ ಕುಮಾರ್ ಶೆಟ್ಟಿ, ಮೊಯ್ದಿನ್ ಬಾವಾ, ಐವನ್ ಡಿಸೋಜ, ಶಕುಂತಳಾ ಶೆಟ್ಟಿ, ವಸಂತ್ ಬಂಗೇರ, ಜೆ.ಆರ್.ಲೋಬೊ, ಮುಖಂಡರಾದ ಕೋಡಿಜಾಲ್ ಇಬ್ರಾಹೀಂ, ಕಣಚೂರು ಮೋನು, ಡಿ.ಸಿ.ಸಿ. ಉಪಾಧ್ಯಕ್ಷ ಸದಾಶಿವ್ ಉಳ್ಳಾಲ್, ವೆಂಕಪ್ಪ ಗೌಡ, ಜಿ.ಎ.ಬಾವಾ, ಹೇಮನಾಥ್ ಶೆಟ್ಟಿ, ಮಲಾರ್ ಮೋನು, ಕೆ.ಹರಿನಾಥ್, ಭರತ್ ಮುಂಡೋಡಿ, ಶಶಿಧರ್ ಹೆಗ್ಡೆ, ಕಲ್ಲಿಗೆ ತಾರನಾಥ್ ಶೆಟ್ಟಿ, ಆರ್.ಕೆ.ಪೃಥ್ವಿರಾಜ್, ಮಿಥುನ್ ರೈ, ಲುಕ್ಮಾನ್ ಬಂಟ್ವಾಳ, ಶಾಲೆಟ್ ಪಿಂಟೊ, ಪಿ.ಪಿ ವರ್ಗೀಸ್, ಅಬ್ದುಲ್ ರವೂಫ್, ನವೀನ್ ಡಿಸೋಜ, ಬಿ.ಎಚ್.ಖಾದರ್, ಗಣೇಶ್ ಪೂಜಾರಿ, ಖಾದರ್ ಏರ್ ರ್ಪೋರ್ಟ್, ಸುರೇಂದ್ರ ಕಂಬಳಿ, ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಸದಾಶಿವ ಶೆಟ್ಟಿ, ಮೊಹಮ್ಮದ್ ಕುಂಜತ್ತಬೈಲ್, ಶಬ್ಬೀರ್.ಎಸ್, ಸಂತೋಷ್ ಶೆಟ್ಟಿ, ನಝೀರ್ ಬಜಾಲ್, ನೀರಜ್ ಚಂದ್ರ ಪಾಲ್, ಶುಭೋದಯ ಆಳ್ವ, ಧನಂಜಯ ಮಟ್ಟು, ಮಯಿಲಪ್ಪ ಸಾಲ್ಯಾನ್, ಚಂದ್ರಹಾಸ ಕರ್ಕೇರಾ, ಸುದರ್ಶನ್ ಜೈನ್, ಮುಹಮ್ಮದ್ ಬಡಗನ್ನೂರ್, ಮಮತಾ ಗಟ್ಟಿ, ವಿಶ್ವಾಸ್ ಕುಮಾರ್ ದಾಸ್, ಅಬ್ದುಲ್ ಸತ್ತಾರ್ ಅಡ್ಯಾರ್, ಎಂ.ಎಸ್.ಮುಹಮ್ಮದ್, ಅನಿತಾ ಹೇಮನಾಥ್ ಶೆಟ್ಟಿ, ಪದ್ಮಶೇಖರ್ ಜೈನ್, ಪುರುಷೋತ್ತಮ ಚಿತ್ರಾಪುರ, ಅಬ್ಬಾಸ್ ಅಲಿ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಆರಿಫ್ ಬಂದರ್, ಲಾರೆನ್ಸ್ ಡಿಸೋಜ, ಮೆರಿಲ್ ರೇಗೋ, ಆಶಿತ್ ಪಿರೇರ, ಗಿರೀಶ್ ಆಳ್ವ, ಸವಾದ್ ಸುಳ್ಯ, ಮೋಹನ್ ಗೌಡ, ದ.ಕ. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಟಿ.ಎಸ್. ಅಬ್ದುಲ್ಲಾ ಸಾಮಣಿಗೆ ಹಾಗೂ ಜಿಲ್ಲಾ ಕಾಂಗ್ರೆಸ್ ನ ಪದಾಧಿಕಾರಿಗಳು, ನಾಯಕರು ತೀವ್ರ ಸಂಪಾತ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News