×
Ad

​ಸರಕಾರ ಮೀನುಗಾರರ ಸಮಸ್ಯೆಗಳಿಗೆ ಸ್ಪಂದಿಸಲಿ : ಉಡುಪಿ ಜಿಲ್ಲಾ ಕಾಂಗ್ರೆಸ್

Update: 2021-07-28 19:38 IST

ಉಡುಪಿ, ಜು.28: ಮುಂದಿನ ಆಗಸ್ಟ್ ತಿಂಗಳಲ್ಲಿ ಕರಾವಳಿಯಲ್ಲಿ ಮೀನುಗಾರಿಕಾ ಋತು ಪ್ರಾರಂಭಗೊಳ್ಳುವ ನಿಟ್ಟಿನಲ್ಲಿ ಸರಕಾರ, ತಕ್ಷಣವೇ ಮೀನುಗಾರಿಕೆಗೆ ಅನುವು ಮಾಡಿಕೊಡಲು ಡೀಸೆಲ್ ಪಾಸ್ ಪುಸ್ತಕದ ನವೀಕರಣ ಮಾಡಿಕೊಡಬೇಕೆಂದು ಉಡುಪಿ ಜಿಲ್ಲಾ ಕಾಂಗ್ರೆಸ್ ರಾಜ್ಯದ ನೂತನ ಸರಕಾರವನ್ನು ಆಗ್ರಹಿಸಿದೆ.

ಕೊರೋನಾ ಸಂಕಷ್ಟದ ಕಾಲದಲ್ಲಿಯೂ ಸರಕಾರ ಅಧಿಕಾರವನ್ನು ಉಳಿಸಿ ಕೊಳ್ಳುವತ್ತ ಚಿಂತಿಸುವುದೇ ಹೊರತು ಜನರ ಸಂಕಷ್ಟಗಳಿಗೆ ಪರಿಹರಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನೀಯ. ಬೋಟುಗಳಿಗೆ ಒಂದು ಟ್ರಿಪ್‌ಗೆ 4ರಿಂದ 5 ಸಾವಿರ ಲೀ.ವರೆಗೆ ಡೀಸೆಲ್ ವಿನಿಯೋಗ ವಾಗುತ್ತದೆ. ಈಗಾಗಲೇ ಸರಕಾರ ಡೀಸೆಲ್‌ಗೆ ಅತ್ಯಧಿಕ ಕರ ಹೇರಿ ಮೀನುಗಾರರು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಕಳೆದ ಬಾರಿ 70 ರೂ. ಇದ್ದ ಬೆಲೆ ಪ್ರಸ್ತುತ 98 ರೂ.ಗೆ ನೆಗೆದಿದೆ ಎಂದು ಜಿಲ್ಲಾ ಕಾಂಗ್ರೆಸ್ ಹೇಳಿಕೆಯಲ್ಲಿ ತಿಳಿಸಿದೆ.

ಕೊರೋನ ಸಂಕಷ್ಟದ ಕಾಲದಲ್ಲಿಯೂ ಸರಕಾರ ಅಧಿಕಾರವನ್ನು ಉಳಿಸಿ ಕೊಳ್ಳುವತ್ತ ಚಿಂತಿಸುವುದೇ ಹೊರತು ಜನರ ಸಂಕಷ್ಟಗಳಿಗೆ ಪರಿಹರಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನೀಯ. ಬೋಟುಗಳಿಗೆ ಒಂದು ಟ್ರಿಪ್‌ಗೆ 4ರಿಂದ 5 ಸಾವಿರ ಲೀ.ವರೆಗೆ ಡೀಸೆಲ್ ವಿನಿಯೋಗ ವಾಗುತ್ತದೆ. ಈಗಾಗಲೇ ಸರಕಾರ ಡೀಸೆಲ್‌ಗೆ ಅತ್ಯಧಿಕ ಕರ ಹೇರಿ ಮೀನುಗಾರರು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಕಳೆದ ಬಾರಿ 70 ರೂ. ಇದ್ದ ಬೆಲೆ ಪ್ರಸ್ತುತ 98 ರೂ.ಗೆ ನೆಗೆದಿದೆ ಎಂದು ಜಿಲ್ಲಾ ಕಾಂಗ್ರೆಸ್ ಹೇಳಿಕೆಯಲ್ಲಿ ತಿಳಿಸಿದೆ.

ಸರಕಾರದಿಂದ ಬರುವ ಸಬ್ಸಿಡಿ ಸೌಲಭ್ಯ ಪಡೆಯಲು ಪಾಸ್‌ಬುಕ್ ಕಡ್ಡಾಯ ವಾಗಿರುವುದರಿಂದ ಅದನ್ನು ನವೀಕರಣಗೊಳಿಸದೆ ಸಬ್ಸಿಡಿ ಡೀಸೆಲ್ ಪಡೆಯಲು ಅಸಾಧ್ಯವಾಗಿದೆ. ಹಾಗೆಯೇ ಸರಕಾರ ದ್ವಿಮುಖ ಸಂಹವನ ಸಾಧನವನ್ನು ಅಳವ ಡಿಸಲು ಆದೇಶಿಸಿದ್ದು, ಮೀನುಗಾರರು ಇದರ ಅಳವಡಿಕೆಗಾಗಿ ಸಮಯಾ ವಕಾಶದ ಬೇಡಿಕೆ ಸಲ್ಲಿಸಿದ್ದಾರೆ.

ಈ ಯಂತ್ರೋಪಕರಣ ಅಳವಡಿಕೆ ಮಾಡಿದಲ್ಲಿ ಅದರ ಸರ್ವಿಸ್ ಸೆಂಟರ್‌ನ ಸೌಲಭ್ಯದ ಬಗ್ಗೆ ಸರಕಾರ ಗಮನಹರಿಸಬೇಕಾಗಿದೆ. ಮತ್ತು ಸರಕಾರ ಲ್ಯಾಂಡಿಂಗ್ ಬರ್ತಿಂಗ್ ಶುಲ್ಕವನ್ನು 3500ದಿಂದ 12 ಸಾವಿರದವರೆಗೆ ಏರಿಸಿರುವುದು ಅವೈಜ್ಞಾನಿಕ. ಕರಾವಳಿ ಪ್ರದೇಶದ ಸಾವಿರಾರು ಕುಟುಂಬಗಳು ಮೀನುಗಾರಿಕೆಯನ್ನು ಅವಲಂಬಿಸಿ ಜೀವನ ನಡೆಸುವುದರಿಂದ ಸರಕಾರ ಶೀಘ್ರವಾಗಿ ಮೀನುಗಾರರ ಈ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದೆ ಎಂದು ಅದು ಹೇಳಿದೆ.

ಕೋವಿಡ್-19 ಹಿನ್ನಲೆಯಲ್ಲಿ ಮೀನುಗಾರರು ಈಗಾಗಲೇ ತೀವ್ರ ಸಂಕಷ್ಟ ದಲ್ಲಿದ್ದು ಅವರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಬೇಕಾಗಿದೆ. ಇಲ್ಲದೇ ಹೋದಲ್ಲಿ ಕರಾವಳಿಯ ಸಮಸ್ತ ಮೀನುಗಾರರ ಪರವಾಗಿ ಕಾಂಗ್ರೆಸ್ ಪಕ್ಷದಿಂದ ಹೋರಾಟ ಅನಿವಾರ್ಯ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹಾಗೂ ಜಿಲ್ಲಾ ಮೀನುಗಾರ ಕಾಂಗ್ರೆಸ್ ಸಂಘಟನೆಯ ಅಧ್ಯಕ್ಷ ಅಖಿಲೇಶ್ ಕೋಟ್ಯಾನ್  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News