ಕೆರೆಗೆ ಬಿದ್ದು ಮೃತ್ಯು

Update: 2021-07-28 15:52 GMT

ಹೆಬ್ರಿ, ಜು.28: ತೋಟದಲ್ಲಿನ ಕೆರೆಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಜು.27ರಂದು ಬೆಳಗ್ಗೆ ನಾಡ್ಪಾಲು ಗ್ರಾಮದ ಕಾಸನಮಕ್ಕಿ ಮುರ್ಸೆ ಎಂಬಲ್ಲಿ ನಡೆದಿದೆ.

ಮೃತರನ್ನು ಎಸ್.ಪುರಂದರ ಹೇರಳೆ (61) ಎಂದು ಗುರುತಿಸಲಾಗಿದೆ.

ಇವರು ತೋಟದ ಕರೆಯ ಬಳಿವಿರುವ ಕೃಷಿಗೆ ಅಳವಡಿಸಿದ ಪಂಪ್‌ ಶೆಡ್‌ನ್ನು ಪರೀಕ್ಷಿಸಲು ಹೋಗಿದ್ದರು. ಈ ವೇಳೆ ಕಾಲು ಜಾರಿ ಬಿದ್ದ ಪರಿಣಾಮ ಅವರು ಕೆರೆಗೆ ಬಿದ್ದು ಮುಳುಗಿ ಮೃತಪಟ್ಟಿದ್ದಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News