​ಜು.30: ಬ್ಯಾರಿ ಪ್ರಚಾರೋಪಾನ್ಯಾಸ

Update: 2021-07-29 04:42 GMT

ಮಂಗಳೂರು, ಜು.29: ಮಂಗಳೂರು ವಿವಿ ಆಧೀನದಲ್ಲಿರುವ ಬ್ಯಾರಿ ಅಧ್ಯಯನ ‌ಪೀಠದ ವತಿಯಿಂದ ಪ್ರಚಾರೋಪಾನ್ಯಾಸ ಕಾರ್ಯಕ್ರಮವು ಜು.30ರಂದು ಸಂಜೆ 5 ಗಂಟೆಗೆ ಗೂಗಲ್ ಮೀಟ್ ಮೂಲಕ ನಡೆಯಲಿದೆ.

ಬಂಟ್ವಾಳ ಬಿ ಮೂಡ ಗ್ರಾಮದ ಸರಕಾರಿ ಪ.ಪೂ. ಕಾಲೇಜಿನ‌ ಉಪನ್ಯಾಸಕ ಪ್ರೊ. ಅಬ್ದುರ್ರಝಾಕ್ ಅನಂತಾಡಿ "ಬ್ಯಾರಿ ಜನಾಂಗ ಮತ್ತು ಕೋವಿಡೋತ್ತರ ಶಿಕ್ಷಣ" ಎಂಬ ವಿಷಯದಲ್ಲಿ ಉಪನ್ಯಾಸ ನೀಡಲಿದ್ದಾರೆ.

ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ಸೈನ್ಸ್ ಇದರ ಪ್ರಾಂಶುಪಾಲ ಪ್ರೊ. ಇಕ್ಬಾಲ್ ಅಹ್ಮದ್ ಯುಟಿ ಮತ್ತು ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ.ಹೈದರಾಲಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕ್ಕರ್ ಸಿದ್ದೀಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News