ಇಹ್ಸಾನ್ ಕರ್ನಾಟಕದಿಂದ ಶೈಕ್ಷಣಿಕ ಜಾಗೃತಿ ಅಭಿಯಾನ

Update: 2021-07-30 12:32 GMT

ಮಂಗಳೂರು: ಕೋವಿಡ್-19 ಹಾವಳಿಯಿಂದ ಜಗತ್ತಿನಾದ್ಯಂತ ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಅವುಗಳ ಪುನರಾರಂಭದ ಬಗ್ಗೆ ಇನ್ನೂ ಅನಿಶ್ಚಿತತೆ ಮನೆಮಾಡಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಜಾಗೃತಿಯನ್ನು ನೀಡುವ ಉದ್ದೇಶದಿಂದ ಇಹ್ಸಾನ್ ಕರ್ನಾಟಕದಿಂದ ಆ.1ರಿಂದ ಆ.15 ಶೈಕ್ಷಣಿಕ ಜಾಗೃತಿ ಅಭಿಯಾನ ನಡೆಯಲಿದೆ.

ಉತ್ತರ ಕರ್ನಾಟಕದಾದ್ಯಂತ ಶೈಕ್ಷಣಿಕ ಜಾಗೃತಿಯನ್ನು ಮೂಡಿಸುತ್ತಿರುವ ಇಹ್ಸಾನ್ ಕಳೆದ ಹತ್ತು ವರ್ಷಗಳಿಂದ ಶಿಕ್ಷಣದಿಂದ ವಂಚಿತರಾದವರಿಗೆ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಈ ಅನಿವಾರ್ಯ ಸಮಯದಲ್ಲಿ ಇಹ್ಸಾನ್ ಕರ್ನಾಟಕ 'ಎಜುಕೇಶನ್ ಅವೇರ್ನೆಸ್ ಕಾಂಪೈನ್' ಹಮ್ಮಿಕೊಂಡಿದ್ದು 'ಉತ್ತಮ ಶಿಕ್ಷಣದಿಂದ ಉತ್ತಮ ಸಮಾಜ' ಎಂಬ ಘೋಷವಾಕ್ಯದೊಂದಿಗೆ ಆ.1ರಿಂದ ಆ.15 ರ ವರೆಗೆ ಈ ಕಾಂಪೈನ್ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News