ಕಬ್ಬಿನಾಲೆ: ಗಾಳಿ-ಮಳೆಗೆ ಅಡಿಕೆ ತೋಟಕ್ಕೆ ಸಂಪೂರ್ಣ ಹಾನಿ

Update: 2021-07-30 13:24 GMT

ಉಡುಪಿ, ಜು.30: ಗುರುವಾರ ಸಂಜೆ ಬೀಸಿದ ಭಾರೀ ಗಾಳಿ-ಮಳೆಗೆ ಹೆಬ್ರಿ ತಾಲೂಕು ಕಬ್ಬಿನಾಲೆ ಗ್ರಾಮದ ಮಂಜುನಾಥ ಹೆಬ್ಬಾರ್ ಅವರ ಮನೆ ಹಾಗೂ ಅಡಿಕೆ ತೋಟಕ್ಕೆ ಭಾರೀ ಹಾನಿ ಸಂಭವಿಸಿದೆ.

ಮಂಜುನಾಥ ಹೆಬ್ಬಾರ್ ಅವರ ಮನೆಗೆ ಭಾಗಶ: ಹಾನಿಯಾಗಿದ್ದರೆ, ಅವರ ಅಡಿಕೆ ತೋಟ ಸಂಪೂರ್ಣ ಹಾನಿಗೊಳಗಾಗಿದೆ. ಇದರಿಂದ ಒಂದೂವರೆ ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಗ್ರಾಮ ಲೆಕ್ಕಿಗರು ನೀಡಿರುವ ವರದಿ ತಿಳಿಸಿದೆ.

ಅದೇ ರೀತಿ ನಿನ್ನೆ ಬೀಸಿದ ಗಾಳಿ-ಮಳೆಯಿಂದ ಕಬ್ಬಿನಾಲೆ ಗ್ರಾಮದ ರಾಜು ಗೌಡ ಅವರ ವಾಸದ ಮನೆಯೂ ಭಾಗಶ: ಹಾನಿಯಾಗಿದ್ದು 1.40 ಲಕ್ಷ ರೂ.ಗಳ ನಷ್ಟದ ಅಂದಾಜು ಮಾಡಲಾಗಿದ್ದರೆ, ಮುದ್ರಾಡಿ ಗ್ರಾಮದ ಕೊರಗ ಶೆಟ್ಟಿ ಇವರ ಮನೆಗೆ 30,000ರೂ. ನಷ್ಟವಾಗಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News