​ಕರಿಮಣಿ ಸರ ಎಳೆದು ಪರಾರಿ: ದೂರು

Update: 2021-07-30 18:29 GMT

ಮಂಗಳೂರು, ಜು.30: ನಗರದ ಕೋಟೆಕಣಿಯ ರಸ್ತೆಯಲ್ಲಿ ಗುರುವಾರ ಪುತ್ರಿ ಜತೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಸ್ಕೂಟರ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿ ಕುತ್ತಿಗೆಗೆ ಕೈ ಹಾಕಿ ಚಿನ್ನದ ಅರ್ಧ ಕರಿಮಣಿ ಸರ ಎಳೆದುಕೊಂಡು ಪರಾರಿಯಾಗಿದ್ದಾನೆ.

ಕರಿಮಣಿ ಸರದ ಒಟ್ಟು ತೂಕ 24 ಗ್ರಾಂ ಆಗಿದ್ದು, 55 ಸಾವಿರ ರೂ. ವೌಲ್ಯದ್ದಾಗಿದೆ ಎಂದು ವಸಂತಿ ಶೆಣೈ ಅವರು ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News