ಆ. 2: ಕರಪತ್ರ ಹಂಚಿಕೆ
Update: 2021-08-01 11:22 GMT
ಮಂಗಳೂರು, ಆ.1: ‘ದೇಶದ ಸಂಪತ್ತನ್ನು ಲೂಟಿ ಹೊಡೆಯುತ್ತಿರುವ ಕಾರ್ಪೊರೇಟ್ ಕಂಪೆನಿಗಳೇ ಭಾರತ ಬಿಟ್ಟು ತೊಲಗಿ’ ಎಂಬ ಘೋಷಣೆ ಯೊಂದಿಗೆ ರೈತ,ಕಾರ್ಮಿಕ, ಕೂಲಿಕಾರರಿಂದ ಆ.9 ರಂದು ನಡೆಯಲಿರುವ ದೇಶವ್ಯಾಪಿ ಪ್ರತಿಭಟನೆಯ ಭಾಗವಾಗಿ ಸಿಐಟಿಯು ಮತ್ತು ಎಐಕೆಎಸ್ ಸಂಘಟನೆಯು ಆ.2ರಂದು ಬೆಳಗ್ಗೆ 10ಕ್ಕೆ ಕರಪತ್ರ ಹಂಚಿಕೆ ಕಾರ್ಯಕ್ರಮವನ್ನು ನಗರದ ಹ್ಯಾಮಿಲ್ಟನ್ ಸರ್ಕಲ್ ಬಳಿ ಹಮ್ಮಿಕೊಂಡಿದೆ ಎಂದು ಪ್ರಕಟನೆ ತಿಳಿಸಿದೆ.