ಕೆರ್ವಾಶೆ: ಕೆರೆಗೆ ಬಿದ್ದು ತಾಯಿ ಮಗು ಮೃತ್ಯು

Update: 2021-08-01 16:30 GMT

ಅಜೆಕಾರು, ಆ.1: ತಾಯಿ ಮತ್ತು ಮಗು ಅಕಸ್ಮಿಕವಾಗಿ ಕೆರೆಗೆ ಬಿದ್ದು ಮೃತ ಪಟ್ಟ ಘಟನೆ ಜು.31ರಂದು ಸಂಜೆ ವೇಳೆ ಕೆರ್ವಾಶೆ ಗ್ರಾಮದ ಮಡಿವಾಳ ಕಟ್ಟೆಕೆರೆ ಎಂಬಲ್ಲಿ ನಡೆದಿದೆ.

ಮೃತರನ್ನು ಕೆರ್ವಾಶೆ ಗ್ರಾಮದ ಕಡ್ಪಾಲ್ ನಿವಾಸಿ ಸೌಮ್ಯ (27) ಮತ್ತು ಅವರ ಮಗ ಆರೂಷ್ (3) ಎಂದು ಗುರುತಿಸಲಾಗಿದೆ. ಕಳೆದ ಏಳು ದಿನಗಳಿಂದ ಸೌಮ್ಯ ಕೆರ್ವಾಶೆಯ ಶಾಲೆಯ ಬಳಿ ಟೈಲರಿಂಗ್ ಕೆಲಸವನ್ನು ಕಲಿಯಲು ಹೋಗುತ್ತಿದ್ದರು. ಜು.31ರಂದು ಮಧ್ಯಾಹ್ನ ಇವರು ಟೈಲರಿಂಗ್ ಕ್ಲಾಸ್‌ಗೆ ತನ್ನ ಜೊತೆ ಮಗನನ್ನು ಕರೆದುಕೊಂಡು ಹೋಗಿದ್ದರು.

ಅಲ್ಲಿಂದ ಕಟ್ಟೆ ಕೆರೆಯ ಬದಿಯಲ್ಲಿರುವ ದಾರಿ ಮೂಲಕ ವಾಪಾಸ್ಸು ಮನೆಗೆ ಬರುತ್ತಿದ್ದ ಸೌಮ್ಯ ಹಾಗೂ ಆರೂಷ್ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸಂಜೆಯಾದರೂ ಮನೆಗೆ ಬಾರದ ಇವರಿಬ್ಬರನ್ನು ಹುಡುಕಾಡಿದಾಗ ಇವರಿಬ್ಬರ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News