ಮಂದಾರ್ತಿಯಲ್ಲಿ ಯಕ್ಷಗಾನ ಕಲಾವಿದರಿಂದ ರಕ್ತದಾನ ಶಿಬಿರ

Update: 2021-08-02 14:19 GMT

ಕೋಟ, ಆ.2: ಮಂದಾರ್ತಿ ಯಕ್ಷಗಾನ ಕಲಾವಿದರ ಒಕ್ಕೂಟ, ಅಭಯ ಹೆಲ್ಪ್ಲೈನ್ ಉಡುಪಿ, ಮಣಿಪಾಲ ಕೆಎಂಸಿ ಆಸ್ಪತ್ರೆಗಳ ಸಹಯೋಗ ದೊಂದಿಗೆ ಮಂದಾರ್ತಿಯಲ್ಲಿ ಬೃಹತ್ ರಕ್ತದಾನ ಶಿಬಿರವು ನಡೆಯಿತು.

ಶಿಬಿರವನ್ನು ಹೆಗ್ಗುಂಜೆ ಗ್ರಾಪಂ ಅಧ್ಯಕ್ಷೆ ಜ್ಯೋತಿ ಹೆಗ್ಡೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹಲವಾರು ಬಾರಿ ರಕ್ತದಾನ ಮಾಡಿದ ಯಕ್ಷಗಾನ ಕಲಾವಿದ ಸಂದೇಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆ ಉದ್ಯಮಿ ಶೇಡಿ ಕೊಡ್ಲು ವಿಠಲ ಶೆಟ್ಟಿ ವಹಿಸಿದ್ದರು. ಹೆಗ್ಗುಂಜೆ ಗ್ರಾಪಂಗೆ ಆಕ್ಸಿಮೀಟರ್ ಹಾಗೂ ಥರ್ಮಲ್ ಸ್ಕ್ಯಾನರ್ ಕೊಡುಗೆಯಾಗಿ ನೀಡಲಾಯಿತು.

ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಗಣೇಶ್ ಕಿಣಿ, ಉದ್ಯಮಿ ದೀಪಕ್ ಶೆಟ್ಟಿ, ಪತ್ರಕರ್ತ ಶ್ರೀಪತಿ ಹೆಗ್ಡೆ ಹಕ್ಲಾಡಿ, ಸಮಾಜ ಸೇವಕರಾದ ದೇವಾನಂದ ಬಾರ್ಕೂರು, ಅಶೋಕ್ ಕುಂದರ್, ಉದ್ಯಮಿ ಮಹೇಶ್ ಉಡುಪ, ಕೆಎಂಸಿ ಆಸ್ಪತ್ರೆಯ ವೈದ್ಯ ಡಾ.ಬ್ರಹ್ಮ ಮೊದಲಾದವರು ಉಪಸ್ಥಿತರಿದ್ದರು. ಭಾಗವತ ಸದಾಶಿವ ಅಮಿನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದಿವಾಕರ ಕುಂದರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News