ವಾರೆಂಟ್ ಉಲ್ಲಂಘಿಸಿ ತಿರುಗಾಟ; ಆರೋಪಿ ಸೆರೆ

Update: 2021-08-02 16:21 GMT

ಮಂಗಳೂರು: ಪ್ರಕರಣವೊಂದಕ್ಕೆ ಸಂಬಂಧಿಸಿ ಕೋರ್ಟ್‌ನ ವಾರಂಟ್ ಉಲ್ಲಂಸಿ ತಿರುಗಾಡುತ್ತಿದ್ದ ಆರೋಪಿಯನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.

ಉರ್ವ ಚಿಲಿಂಬಿ ನಿವಾಸಿ ರಕ್ಷಿತ್ ಮೊಯ್ಲಿ (24) ಬಂಧಿತ ಆರೋಪಿ.

ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದ ಜಾಮೀನು ರಹಿತ ವಾರೆಂಟ್ ನಿರ್ಲಕ್ಷಿಸಿ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈತ ನಗರದ ಶೇಡಿಗುರಿ ಈರಿ ಎಂಬಲ್ಲಿರುವ ಕೊರ್ದಬ್ಬು ದೇವಸ್ತಾನ ಸಮೀಪದಲ್ಲಿ ಇರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಗೆ 3ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ಆದೇಶ ಉಲ್ಲಂಸಿದ ಪರಿಣಾಮ ಉರ್ವ ಠಾಣೆಯಲ್ಲಿ ಕಲಂ174 (ಎ) ಐಪಿಸಿಯಡಿ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News