ಕಾಸರಗೋಡು: ರಸ್ತೆ ಅಪಘಾತ; ದ್ವಿಚಕ್ರ ವಾಹನ ಸವಾರ ಬಲಿ

Update: 2021-08-03 04:49 GMT
ಅನಿಲ್ ಕುಮಾರ್

ಕಾಸರಗೋಡು: ಬೈಕ್ ಮತ್ತು ಸ್ಕೂಟರ್ ನಡುವೆ ಉಂಟಾದ ಅಪಘಾತದಲ್ಲಿ  ಕುಂಬಳೆ ನಿವಾಸಿಯೋರ್ವರು ಮೃತಪಟ್ಟ ಘಟನೆ ಸೀತಾಂಗೋಳಿ - ಕಾಸರಗೋಡು ರಸ್ತೆಯ ಮಾಯಿಪ್ಪಾಡಿಯಲ್ಲಿ ನಡೆದಿದೆ.

ಮೃತರನ್ನು ಕುಂಬಳೆ ಕಂಚಿಕಟ್ಟೆಯ ಅನಿಲ್ ಕುಮಾರ್ (56) ಎಂದು ಗುರುತಿಸಲಾಗಿದೆ.

ಅವರು ಕುಂಬಳೆಯಲ್ಲಿ ಇನ್ವರ್ಟರ್‌ ನ ಡಿಸ್ಟ್ರಿಬ್ಯೂಟರ್ ಆಗಿದ್ದರು. ಸೋಮವಾರ ಸಂಜೆ ಕಾಸರಗೋಡಿನಿಂದ ಕುಂಬಳೆಗೆ ಸ್ಕೂಟರ್ ನಲ್ಲಿ ಬರುತ್ತಿದ್ದಾಗ ಬೈಕ್ ಢಿಕ್ಕಿ  ಹೊಡೆದಿದ್ದು, ಗಂಭೀರ ಗಾಯಗೊಂಡ ಅನಿಲ್ ಕುಮಾರ್ ರನ್ನು ಆಸ್ಪತ್ರೆಗೆ ತಲುಪಿಸಿದರೂ ಅವರು ಮೃತಪಟ್ಟರು ಎಂದು ತಿಳಿದುಬಂದಿದೆ.

ಈ ಬಗ್ಗೆ ಕುಂಬಳೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News