ಅಲ್ ಕರೀಂ ಜುಮಾ ಮಸೀದಿ ಹಳೆಕೋಟೆ: ಮಹಾಸಭೆ, ಪದಾಧಿಕಾರಿಗಳ ಆಯ್ಕೆ

Update: 2021-08-04 11:48 GMT
ಹಾಜಿ ಮುಹಮ್ಮದ್ ತ್ವಾಹ

ಉಳ್ಳಾಲ: ಅಲ್ ಕರೀಂ ಜುಮಾ ಮಸೀದಿ ಹಳೆಕೋಟೆ ಉಳ್ಳಾಲ ಇದರ ಮಹಾಸಭೆಯು ಇತ್ತೀಚೆಗೆ ನಡೆಯಿತು.

ಸಭೆಯಲ್ಲಿ ಲೆಕ್ಕಪತ್ರ ಮಂಡನೆ, ಹಳೆ ಸಮಿತಿ ಸದಸ್ಯರ ಬರ್ಕಾಸ್ತು ಹಾಗೂ ಹೊಸ ಸಮಿತಿ ಸದಸ್ಯರ ಆಯ್ಕೆ ನಡೆಯಿತು. ಸಭೆಯ ಹಂಗಾಮಿ ಅಧ್ಯಕ್ಷರಾಗಿ ಆಯ್ಕೆಯಾದ ಫಾರೂಕ್ ಯು.ಎಚ್‌ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಆ. 1ರಂದು ನಡೆದ ಸಮಿತಿ ಸದಸ್ಯರ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ: ಹಾಜಿ ಮುಹಮ್ಮದ್ ತ್ವಾಹ ಅವರು ಏಳನೇ ಬಾರಿ ಆಯ್ಕೆಯಾದರು. ಉಪಾಧ್ಯಕ್ಷರು:  ಸಮೀರ್ ಮುಹಮ್ಮದ್, ಪ್ರಧಾನ ಕಾರ್ಯದರ್ಶಿ: ಇಲ್ಯಾಸ್ ಹಾಜಬ್ಬ, ಜೊತೆ ಕಾರ್ಯದರ್ಶಿ: ಮುಹಮ್ಮದ್ ಫೈರೋಝ್, ಕೊಶಾಧಿಕಾರಿ: ಅಬ್ದುಲ್ ರೌಫ್, ಲೆಕ್ಕ ಪರಿಶೋಧಕ:  ಫಾರೂಕ್ ಯು.ಎಚ್ ಹಾಗೂ ಸಮಿತಿ ಸದಸ್ಯರಾದ ಹಾಜಿ ಝೈನುದ್ದೀನ್, ಮುಹಮ್ಮದ್ (ಬಿಲ್ಡಿಂಗ್ ಕಂಟ್ರಾಕ್ಟರ್) ಯೂಸುಪಾಕ, ಮುಹಮ್ಮದ್ ಕೆಎಸ್ಎ, ಅಲ್ತಾಪ್ ಯು.ಎಚ್, ಎಂ ಎಚ್ ಇಬ್ರಾಹಿಂ, ಹುಸೈನ್, ರಝಾಕ್ ಹಳೆಕೋಟೆ, ಹುಸೈನ್ ಈಶ ಅಬ್ದುಲ್ಲಾಕ, ಅಬ್ದುಲ್ ಸಲಾಂ, ಮೊದಲಾದ ಸಮಿತಿ ಸದಸ್ಯರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News