ಮಣಿಪಾಲದ ಪ್ರೊಫೆಸರ್ ಖಾತೆಯಿಂದ ಹಣ ವಂಚನೆ
Update: 2021-08-04 15:06 GMT
ಉಡುಪಿ, ಆ.4: ಮಣಿಪಾಲದ ಅಸೋಸಿಯೇಟ್ ಪ್ರೊಫೆಸರೊಬ್ಬರ ಖಾತೆ ಯಿಂದ ಹಣ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ ಕೆಎಂಸಿಯ ಫಾರ್ಮಕೊಲೋಜಿ ವಿಭಾಗದ ಅಸೋಸಿಯೇಟ್ ಪ್ರೊಪೆಸರ್ ಅಂಬೆರ್ಕರ್ ಮೋಹನ್ ಬಾಬು ವಿ.(43) ಎಂಬವರು ಎಸ್ಬಿಐ ಮಣಿಪಾಲ ಶಾಖೆಯಲ್ಲಿ ಖಾತೆ ಹೊಂದಿದ್ದು, ಆ.3ರಂದು ಇವರಿಗೆ ಅಪರಿಚಿತರು ಮೊಬೈಲ್ ಸಂದೇಶದಲ್ಲಿ ಬ್ಯಾಂಕ್ ಖಾತೆಯ ಕೆವೈಸಿ ಅಪ್ಡೇಟ್ ಮಾಡುವಂತೆ ಲಿಂಕ್ ಕಳುಹಿಸಿದ್ದರು.
ಅದರಂತೆ ಅವರು ಲಿಂಕ್ ಕ್ಲಿಕ್ ಮಾಡಿದಾಗ ಅವರ ಬ್ಯಾಂಕ್ ಖಾತೆಯಿಂದ ಒಟ್ಟು 33,500ರೂ. ಹಣವನ್ನು ವಿದ್ ಡ್ರಾ ಆಗಿರುವುದಾಗಿ ದೂರಲಾಗಿದೆ.