ಉಡುಪಿ: ಆ.6ರಂದು ನೂತ ಸಚಿವರಿಗೆ ಅಭಿನಂದನಾ ಸಮಾರಂಭ
Update: 2021-08-04 15:11 GMT
ಉಡುಪಿ, ಆ.4: ರಾಜ್ಯದ ಸಚಿವ ಸಂಪುಟದಲ್ಲಿ ನೂತನ ಸಚಿವರಾಗಿ ಆಯ್ಕೆಯಾಗಿ ಪ್ರಮಾಣವಚನ ಸ್ವೀಕರಿಸಿದ ವಿ.ಸುನಿಲ್ ಕುಮಾರ್ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಆ.6ರಂದು ಅಪರಾಹ್ನ 3ಗಂಟೆಗೆ ಅಂಬಾಗಿಲು ಅಮೃತ್ ಗಾರ್ಡನ್ನಲ್ಲಿ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದೆ.
ಉಡುಪಿ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರೆಲ್ಲರೂ ಗಡಿಭಾಗವಾದ ಪರ್ಕಳದಲ್ಲಿ ಮಧ್ಯಾಹ್ನ 2.30ಕ್ಕೆ ಸೇರಿ ನೂತನ ಸಚಿವರನ್ನು ಸ್ವಾಗತಿಸಿ ಬಳಿಕ ಸಮಾರಂಭ ನಡೆಯುವ ಅಮೃತ್ ಗಾರ್ಡನ್ಗೆ ತೆರಳುವುದು ಎಂದು ಶಾಸಕ ರಘುಪತಿ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.