ಬೇಟೆಗಾಗಿ ನಾಡಗುಂಡು ಸಂಗ್ರಹ: ಇಬ್ಬರ ಬಂಧನ

Update: 2021-08-04 15:12 GMT

ಕುಂದಾಪುರ, ಆ.4: ಶಂಕರನಾರಾಯಣ ವಲಯದ ಮೊಳಹಳ್ಳಿ ಘಟಕದ ಶಿರಿಯಾರ ಗಸ್ತು ವ್ಯಾಪ್ತಿಯ ಶಿರಿಯಾರ ಮೀಸಲು ಅರಣ್ಯದಲ್ಲಿ ವನ್ಯ ಜೀವಿ ಬೇಟೆಗಾಗಿ ಇರಿಸಿದ್ದ ನಾಡಗುಂಡುಗಳನ್ನು ಸಂಗ್ರಹಿಸುತ್ತಿದ್ದ ಇಬ್ಬರನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.

ಕೆದೂರು ಗ್ರಾಮದ ಬೆಳಗೋಡು ನಿವಾಸಿ ಕೆ.ಎಸ್. ಶೇಷಾದ್ರಿ ಯಾನೆ ಸುರೇಂದ್ರ ಹಾಗೂ ಕೊರ್ಗಿ ಗ್ರಾಮದ ಹೆಸ್ಕತ್ತೂರು ಸುಧಾಕರ ಬಂಧಿತ ಆರೋಪಿಗಳು.

ಇವರಿಂದ ಕೃತ್ಯಕ್ಕೆ ಬಳಸಿದ ಒಂದು ಬೈಕ್, ಎರಡು ಮೊಬೈಲ್ ಹಾಗೂ ಏಳು ನಾಡಗುಂಡನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News