ನೇಣು ಬಿಗಿದು ಯುವಕ ಆತ್ಮಹತ್ಯೆ
Update: 2021-08-05 21:42 IST
ಉಡುಪಿ : 76ನೇ ಬಡಗುಬೆಟ್ಟು ಗ್ರಾಮದ ಕಸ್ತೂರ್ಬಾ ನಗರದಲ್ಲಿ ರುವ ತಿಂಡಿ ತಯಾರಿಕಾ ಘಟಕವೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತಿದ್ದ ಜಗದೀಶ್(30) ಎಂಬಾತನು ತಾನು ವಾಸಮಾಡಿಕೊಂಡಿದ್ದ ಇಂದಿರಾನಗರ ಚರ್ಚ್ ಬಳಿಯ ಬಾಡಿಗೆ ಮನೆಯಲ್ಲಿ ಆ.3ರ ರಾತ್ರಿ ಯಾವುದೋ ವೈಯಕ್ತಿಕ ವಿಚಾರದಲ್ಲಿ ಮನನೊಂದು ನೇಣು ಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.