9ನೆ ತರಗತಿಯಿಂದ ಪಿಯು ವರೆಗೆ ದಿನ ಬಿಟ್ಟು ದಿನ ಶಾಲೆ, ಕಾಲೇಜು ತೆರೆಯುವ ಬಗ್ಗೆ ಚಿಂತನೆ: ಸಿಎಂ ಬಸವರಾಜ ಬೊಮ್ಮಾಯಿ
Update: 2021-08-12 13:07 IST
ಮಂಗಳೂರು : 9ನೆ ತರಗತಿಯಿಂದ ಪಿಯುಸಿ ವರೆಗೆ ದಿನ ಬಿಟ್ಟು ದಿನಗಳಲ್ಲಿ ಶಾಲೆ, ಕಾಲೇಜು ತೆರೆಯುವ ಬಗ್ಗೆ ಚಿಂತನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಂಗಳೂರು ನಗರಕ್ಕೆ ಗುರುವಾರ ಭೇಟಿ ನೀಡಿರುವ ಅವರು ಈ ಹೇಳಿಕೆ ನೀಡಿದರು.
ಇದರ ಪ್ರಗತಿಯನ್ನು ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಈ ಸಂದರ್ಭ ಅವರು ತಿಳಿಸಿದ್ದಾರೆ.