ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷರಾಗಿ ಯೋಗೀಶ್ ವಿ. ಶೆಟ್ಟಿ ಪುನರಾಯ್ಕೆ
Update: 2021-08-12 13:05 GMT
ಉಡುಪಿ, ಆ.12: ಜಾತ್ಯತೀತ ಜನತಾ ದಳದ ಉಡುಪಿ ಜಿಲ್ಲಾಧ್ಯಕ್ಷರಾಗಿ ಯೋಗೀಶ್ ವಿ.ಶೆಟ್ಟಿ ಇವರು ಪುನರಾಯ್ಕೆಗೊಂಡಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಅವರು ಪಕ್ಷದ ಹಿರಿಯ ನಾಯಕರಾದ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಇವರ ಶಿಫಾರಸ್ಸಿನಂತೆ ಯೋಗೀಶ್ ಶೆಟ್ಟಿ ಇವರನ್ನು ಅಧ್ಯಕ್ಷರಾಗಿ ಪುನರಾಯ್ಕೆ ಮಾಡಿದ್ದಾರೆ. ಯೋಗೇಶ್ ಶೆಟ್ಟಿ ಅವರು 2016ರಿಂದ ಉಡುಪಿ ಜಿಲ್ಲಾ ಜೆಡಿಎಸ್ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತಿದ್ದಾರೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.