ಕಲ್ಲಡ್ಕಅನುಗ್ರಹ ಸಂಸ್ಥೆಗೆ ನೂತನ ಪದಾಧಿಕಾರಿಗಳ ಆಯ್ಕೆ

Update: 2021-08-15 16:52 GMT

ಕಲ್ಲಡ್ಕ : ಅನುಗ್ರಹ ವಿಮೆನ್ಸ್ ಕಾಲೇಜಿನ ಆಡಳಿತ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆಯು ಸ್ವಾತಂತ್ರ್ಯೋತ್ಸವದ ಬಳಿಕ ಟ್ರಸ್ಟಿನ ಮಹಾಸಭೆಯಲ್ಲಿ ನಡೆಯಿತು.

ಮೌಲಾನಾ ಯಹ್ಯಾ ತಂಙಳ್ ಮದನಿ ಮಾತನಾಡಿದರು. ಮುಕ್ತಾರ್ ಅಹ್ಮದ್ ಸ್ವಾಗತಿಸಿ,  ಯಾಸೀನ್ ಬೇಗ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಳೆದ ಎರಡು ವರ್ಷಗಳ ವರದಿಯನ್ನು ಪ್ರಧಾನ ಕಾರ್ಯದರ್ಶಿ ಮತ್ತು ಆಯ-ವ್ಯಯ ಲೆಕ್ಕಾಚಾರವನ್ನು ಖಜಾಂಚಿ ಮಂಡಿಸಿದರು. ಕೆಲವೊಂದು ತಿದ್ದುಪಡಿಯೊಂದಿಗೆ ವರದಿಗಳನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.

ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಮಂಗಳೂರು ವಲಯ ಸಂಚಾಲಕ ಮತ್ತು ಕಾರ್ಯದರ್ಶಿ ನಡೆಸಿಕೊಟ್ಟರು. ಯಾಸೀನ್ ಬೇಗ್ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಇಸ್ಹಾಕ್ ಎಸ್.ಎಫ್ ಅವರು ಮರು ಆಯ್ಕೆಗೊಂಡರು. ಇನ್ನೋರ್ವ ಉಪಾಧ್ಯಕ್ಷರಾಗಿ ಇಮಾರತ್ ಅಲಿ ಕಲ್ಲಡ್ಕ ಅವರನ್ನು ಆಯ್ಕೆ ಮಾಡಲಾಯಿತು.

ಪ್ರಧಾನ ಕಾರ್ಯದರ್ಶಿಯಾಗಿ ಶಾಹುಲ್ ಹಮೀದ್ ಪರ್ಲಿಯ ಮತ್ತು ಜತೆ ಕಾರ್ಯದರ್ಶಿಯಾಗಿ ಸುಲೈಮಾನ್  ಅಪೋಲೋ ಕಲ್ಲಡ್ಕ ಅವರನ್ನು ಆಯ್ಕೆ ಮಾಡಲಾಯಿತು. ಹೈದರ್ ಅಲಿ ವಿಟ್ಲ ಖಜಾಂಚಿಯಾಗಿ ಮತ್ತು ಸಂಚಾಲಕರಾಗಿ ಅಮಾನುಲ್ಲಾ ಖಾನ್ ಮರು ಆಯ್ಕೆಗೊಂಡರು. ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಕೆ.ಎಂ.ಶರೀಫ್ ಸಾಹಬ್ ಮಾತನಾಡಿ, ಹಿತವಚನ ನೀಡಿದರು. ಮೌಲಾನಾ ಯಹ್ಯಾ ತಂಙಳ್ ದುವಾ ನೆರವೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News