ಅಂದರ್‌ ಬಾಹರ್: ಐವರ ಬಂಧನ

Update: 2021-08-16 16:20 GMT

ಬೈಂದೂರು, ಆ.16: ಕೆರ್ಗಾಲು ಗ್ರಾಮದ ನಾಯ್ಕನಕಟ್ಟೆ ಬಸವೇಶ್ವರ ಸಮಾಜ ಮಂದಿರದ ಬಳಿ ಆ.15ರಂದು ಸಂಜೆ ವೇಳೆ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ನುಜಾಡಿಯ ಸಂಜೀವ ಗಾಣಿಗ(46), ರಾಜೇಂದ್ರ(38), ಹೊಸ್ಕೋಟೆಯ ರಾಜು(52), ನಾಯ್ಕನಕಟ್ಟೆಯ ರಾಮಚಂದ್ರ(50), ಕೆರ್ಗಾಲಿನ ರಮೇಶ(41) ಬಂಧಿತ ಆರೋಪಿಗಳು. ಇವರಿಂದ 4500ರೂ. ನಗದು ವಶಪಡಿಸಿಕೊಳ್ಳ ಲಾಗಿದೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News