ಮರವಂತೆ: ಗಾಂಜಾ ಮಾರುತಿದ್ದ ಆರೋಪದಲ್ಲಿ ಇಬ್ಬರ ಬಂಧನ

Update: 2021-08-21 16:23 GMT

ಕುಂದಾಪುರ, ಆ.21: ತ್ರಾಸಿ ಗ್ರಾಮದ ಮರವಂತೆಯ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರು ಯುವಕರನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.

ಮುಳ್ಳಿಕಟ್ಟೆ ಹೊಸಾಡು ನಿವಾಸಿ ನಿಶಾನ್ (21), ಮರವಂತೆ ನಿವಾಸಿ ಪ್ರಥಮ್ ಕುಮಾರ್(20) ಬಂಧಿತ ಆರೋಪಿಗಳು.

ಇವರು ತ್ರಾಸಿಯ ಪ್ರವಾಸಿ ಮಂದಿರದ ಬಳಿ ಗಾಳಿಮರದ ಕೆಳಗೆ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆ ಗಂಗೊಳ್ಳಿ ಪಿಎಸ್ಐ ನಂಜಾ ನಾಯ್ಕ್ ಎನ್. ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಇವರಿಬ್ಬರಿಂದ 5,000ರೂ. ಮೌಲ್ಯದ 120 ಗ್ರಾಂ ಗಾಂಜಾ, ನಗದು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News