ಸಮತಾ ಸೈನಿಕ ದಳದಿಂದ ಸಚಿವ ಕೋಟಗೆ ಅಭಿನಂದನೆ

Update: 2021-08-22 14:04 GMT

ಉಡುಪಿ, ಆ.22: ಅಂಬೇಡ್ಕರ್ ವಸತಿ ಯೋಜನೆಯ ಹಣವನ್ನು ಐದು ಲಕ್ಷ ರೂ.ಗೆ ಹೆಚ್ಚಿಸಿರುವ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಅಭಿನಂದಿಸಿದ ಉಡುಪಿ ಸಮತಾ ಸೈನಿಕ ದಳ, ಈ ಬಗ್ಗೆ ಕೂಡಲೇ ಅಧಿಸೂಚನೆ ಹೊರಡಿಸುವಂತೆ ಮನವಿ ಸಲ್ಲಿಸಲಾಯಿತು.

ಸಮತಾ ಸೈನಿಕ ದಳ ಕಳೆದ ಮೂರು ವರ್ಷಗಳಿಂದಲೂ ಅಂಬೇಡ್ಕರ್ ಆವಾಸ್ ಯೋಜನೆಯಲ್ಲಿ ಕನಿಷ್ಠ 5 ಲಕ್ಷ ರೂ. ಘೋಷಣೆ ಮಾಡುವಂತೆ ಹೋರಾಟ ನಡೆಸುತ್ತಿದ್ದು, ಈ ಬಗ್ಗೆ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೂ ಮನವಿ ಸಲ್ಲಿಸಲಾಗಿತ್ತು. ಈ ನಿಟ್ಟಿನಲ್ಲಿ ಕೋಟ ಶ್ರೀನಿವಾಸ ಪೂಜಾರಿ ಸಮಾಜ ಕಲ್ಯಾಣ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಮೂರೇ ದಿನದಲ್ಲಿ ಈ ಘೋಷಣೆ ಮಾಡಿದ್ದಾರೆ ಎಂದು ಜಿಲ್ಲಾಧ್ಯಕ್ಷ ವಿಶ್ವನಾಥ್ ಪೇತ್ರಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಮತಾ ಸೈನಿಕ ದಳದ ಮುಖಂಡರಾದ ಸುಧಾಕರ್ ಸೂರ್ಗೋಲ್ಲಿ, ಜ್ಯೋತಿ ಶಿರಿಯಾರ, ವಿಗ್ನೇಶ್ ಬ್ರಹ್ಮಾವರ, ಗೋಪಾಲ ಮಿಯಾರ್, ಶೇಖರ್ ಮಿಯ್ಯಾರ್, ಚಂದ್ರ, ಪ್ರವೀಣ್ ಶಿರಿಯಾರ, ಪ್ರಶಾಂತ್ ಶಿರಿಯಾರ, ನಾಗೇಶ್ ಶಿರಿಯಾರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News