ಜೋಕಟ್ಟೆ: ಶ್ರಮದಾನದ ಮೂಲಕ ರಸ್ತೆ ದುರಸ್ತಿ
Update: 2021-08-22 14:09 GMT
ಸುರತ್ಕಲ್, ಆ. 22: ಎಸ್ವೈಎಸ್ ಹಾಗೂ ಎಸ್ಸೆಸ್ಸೆಫ್ ಜೋಕಟ್ಟೆ ಇದರ ವತಿಯಿಂದ ಜೋಕಟ್ಟೆಯಿಂದ ಕೂಳೂರು ಹೋಗುವ ರಸ್ತೆ ಆಯಿಲ್ ಕಂಪೆನಿ ಹತ್ತಿರದ ಹದಗೆಟ್ಟ ರಸ್ತೆಯನ್ನು ರವಿವಾರ ಶ್ರಮದಾನದ ಮೂಲಕ ದುರಸ್ತಿಗೊಳಿಸಲಾಯಿತು.
ಸಂಘಟನೆಯ ಸದಸ್ಯರಾದ ಖಾದರ್ ಎಚ್ಪಿಸಿಎಲ್, ಅಲಿ ಸಅದಿ ತೋಕೂರು, ಹಕೀಮ್ ಅರಿಕೆರೆ, ಝುಬೈರ್, ಸಿದ್ದೀಕ್ ಕೆಬಿಎಸ್, ಸಮ್ರಾನ್, ಮುಸ್ತಫಾ ಕೆಬಿಎಸ್, ಶಾಹಿದ್ ನಿಝಾಮಿ, ಶಫೀಕ್ ಉಸ್ತಾದ್, ಶಫೀಕ್ ತೋಕೂರು, ಶಿಹಾಬ್ ಕೆಬಿಎಸ್, ಮುಝಮ್ಮಿಲ್ ಶ್ರಮದಾನದಲ್ಲಿ ಪಾಲ್ಗೊಂಡರು.