ಬೆಳ್ತಂಗಡಿ: ಎಸ್ಸೆಸ್ಸೆಫ್ ಕಕ್ಯಾನ ಯುನಿಟ್ ಸಭೆ

Update: 2021-08-23 18:11 GMT

ಬೆಳ್ತಂಗಡಿ: ಆ. 23, ಎಸ್ಸೆಸ್ಸೆಫ್ ಉಜಿರೆ ಸೆಕ್ಟರ್ ವ್ಯಾಪ್ತಿಯ ಕಕ್ಯಾನ ಯುನಿಟ್ ನ ಅರ್ಧ ವಾರ್ಷಿಕ ಸಭೆಯು ಕಕ್ಯಾನ ಮಸೀದಿ ಹಾಲ್ ನಲ್ಲಿ ಸೋಮವಾರ ನಡೆಯಿತು.

ಯುನಿಟ್ ಅಧ್ಯಕ್ಷ ಆಸಿಫ್ ಕಕ್ಯಾನ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಕ್ಯಾನ ಜುಮಾ ಮಸೀದಿ ಅಧ್ಯಕ್ಷ ಖಾಲಿದ್ ಕೆ.ಎಚ್. ಮಾತನಾಡಿ ಸಂಘಟನೆಯ ಬಲವರ್ಧನೆಗಾಗಿ ಹಮ್ಮಿಕೊಳ್ಳಬೇಕಾದ ಕಾರ್ಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಎಸ್ಸೆಸ್ಸೆಫ್ ಉಜಿರೆ ಸೆಕ್ಟರ್ ಕಾರ್ಯದರ್ಶಿ ಅಬ್ದುಲ್ ಬಾಸಿತ್ ಹಿಮಾಮಿ ಸಖಾಫಿ ಬೆಳಾಲು, ಮುಸ್ತಫಾ ಮುಈನಿ ಬೆಳಾಲು, ಕಕ್ಯಾನ ಮಸೀದಿ ಉಪಾಧ್ಯಕ್ಷ ಮುಹಮ್ಮದ್ ಅಲಿ, ಪ್ರಧಾನ ಕಾರ್ಯದರ್ಶಿ ಎಂ.ಎಚ್. ಯಾಕೂಬ್, ಜೊತೆ ಕಾರ್ಯದರ್ಶಿ ಆದಂ, ಕೋಶಾಧಿಕಾರಿ ಎಂ.ಎಚ್. ಅಶ್ರಫ್, ದುಬಾಯಿ ಕೆಸಿಎಫ್ ಸದಸ್ಯ ಯು.ಎಂ.ಖಾಲಿದ್, ಎಸ್.ವೈ.ಎಸ್ ನ ಹೈದರ್ ಕಕ್ಯಾನ ಮೊದಲಾದವರು ಉಪಸ್ಥಿತರಿದ್ದರು.

ಸಲಾಮತುಲ್ ಅನಾಮ್ ಸ್ವಲಾತ್ ಕಮಿಟಿ ಹಾಗೂ ಇರ್ಶಾದುಲ್ ಮುಸ್ಲಿಮೀನ್ ಯಂಗ್ ಮೆನ್ಸ್ ನ ಪದಾಧಿಕಾರಿಗಳು ಹಾಗೂ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

ಇದೇ ವೇಳೆ ಕಕ್ಯಾನ ಯುನಿಟ್ ನಿಂದ ಸೈಯ್ಯದ್ ಮಾಸ್ಟರ್ ಮತ್ತು ಮುಹಮ್ಮದ್ ಸಮೀರ್ ಇವರನ್ನು ಉಜಿರೆ ಸೆಕ್ಟರ್ ಪ್ರತಿನಿಧಿಗಳನ್ನಾಗಿ ಆರಿಸಲಾಯಿತು.

ಸೈಯ್ಯದ್ ಮಾಸ್ಟರ್ ಸ್ವಾಗತಿಸಿದರು. ಕೋಶಾಧಿಕಾರಿ ಮುಹಮ್ಮದ್ ಶಫೀಕ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಆರಿಫ್ ಕಕ್ಯಾನ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News