ಪತಿಯ ಆತ್ಮಹತ್ಯೆಗೆ ಮಾನಹಾನಿಕಾರಕ ಸಂದೇಶ ಕಾರಣ: ಪತ್ನಿ ದೂರು

Update: 2021-08-24 15:13 GMT

ಮಂಗಳೂರು, ಆ.24: ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೈದ ಪ್ರಕರಣಕ್ಕೆ ಮಾನಹಾನಿಕಾರಕ ಸಂದೇಶವೇ ಕಾರಣವೆಂದು ಮೃತರ ಪತ್ನಿ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ.

ರೂಪೇಶ್ ಪವನ್ ರಾಜ್ ಎಂಬವರು ಆ.18ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ನಂತರ ಮೃತರ ಪತ್ನಿ ವಿನಿತಾಗೆ ಗಂಡ ಬರೆದಿಟ್ಟಿದ್ದ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ ತನ್ನ ಸಾವಿಗೆ ಮಂಜ ನಾಯ್ಕ್, ನಯನ, ಹರೀಶ್ ಹಾಗೂ ಯಶವಂತರವರೇ ಕಾರಣ ಎಂದು ಬರೆದಿದ್ದಾರೆ. ಮೃತರ ಸಂಬಂಧಿಕರಲ್ಲಿ, ರೂಪೇಶ್ ಬಗ್ಗೆ ಆರೋಪಿಗಳು ‘ಸಾಲಗಾರ, ಆತನ ಮೇಲೆ ಹತ್ತು ಹಲವಾರು ಕೇಸುಗಳಿವೆ’ ಎಂಬಿತ್ಯಾದಿ ಅಪಪ್ರಚಾರ ಮಾಡಿ ಮಾನಹಾನಿ ಮಾಡಿದ್ದಾರೆ. ಇದು ಮಾತ್ರವಲ್ಲದೆ ಅವಾಚ್ಯವಾಗಿ ನಿಂದಿಸಿ, ಅವರ ಸಾವಿಗೆ ದುಷ್ಪ್ರೇರಣೆ ನೀಡಿದ್ದಾರೆಂದು ಮೃತರ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News