ಉಡುಪಿ: ಆರ್ಟಿಎ ಸಭೆ ಮುಂದೂಡಿಕೆ
Update: 2021-08-24 16:39 GMT
ಉಡುಪಿ, ಆ.24: ಉಚ್ಛ ನ್ಯಾಯಾಲಯದಿಂದ ತಡೆಯಾಜ್ಞೆ ಇರುವ ಹಿನ್ನೆಲೆಯಲ್ಲಿ ಆ.25ರಂದು 11ಗಂಟೆಗೆ ಮಣಿಪಾಲದ ಪ್ರಾದೇಶಿಕ ಸಾರಿಗೆ ಅಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆಯಲು ನಿಗದಿಯಾಗಿದ್ದ ವೇಳಾಪಟ್ಟಿ ಪರಿಷ್ಕರಣೆಗೆ ಆಕ್ಷೇಪಣೆ ಆಲಿಸುವ ಸಭೆಯನ್ನು ಮುಂದಿನ ಆದೇಶದ ವರೆಗೆ ಮುಂದೂಡಲಾಗಿದೆ ಎಂದು ಉಡುಪಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ-ಮಂಗಳೂರು ಕರಾವಳಿ ಬಸ್ ಮಾಲಕರ ಸಂಘ ರಾಜ್ಯ ಉಚ್ಛ ನ್ಯಾಯಾಲಯದಿಂದ ಸಭೆ ನಡೆಯದಂತೆ ತಡೆಯಾಜ್ಞೆಯನ್ನು ತಂದಿದೆ.