ಕೆಎಂಸಿ ಮಣಿಪಾಲ: ಆ.31ರಂದು ಹೊರರೋಗಿ ವಿಭಾಗಕ್ಕೆ ರಜೆ
Update: 2021-08-29 19:16 IST
ಮಣಿಪಾಲ, ಆ.29: ಶ್ರೀಕೃಷ್ಣ ಜನ್ಮಾಷ್ಟಮಿ (ವಿಟ್ಲಪಿಂಡಿ) ಪ್ರಯುಕ್ತ ಆ.31ರ ಮಂಗಳವಾರದಂದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಹೊರರೋಗಿ ವಿಭಾಗಕ್ಕೆ ರಜೆ ಇರುತ್ತದೆ. ಆದರೂ ಅಪಘಾತ ಹಾಗೂ ತುರ್ತು ಚಿಕಿತ್ಸಾ ವಿಭಾಗವು ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.