ಮೊಬೈಲ್ ಕರೆ ಮಾಡಿ ಬೆದರಿಕೆ: ದೂರು
Update: 2021-09-04 16:17 GMT
ಬ್ರಹ್ಮಾವರ, ಸೆ.4: ನೀಲಾವರ ಗ್ರಾಮದ ಹೆಬ್ಬಾರ್ಬೆಟ್ಟುವಿನ ಸರಸ್ವತಿ, ಅವರ ಪತಿ ದೇವದಾಸ್ ಹಾಗೂ ಮಕ್ಕಳಿಗೆ ಅಪರಿಚಿತರು ಸೆ.2ರಂದು ಸಂಜೆ ಮೊಬೈಲ್ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ನಿಂದಿಸಿ ಜೀವ ಬೆದರಿಕೆ ಹಾಕಿದ್ದು, ಇವರಿಗೆ ಆರೋಪಿಗಳಾದ ಅಶೋಕ ಮತ್ತು ಚಂದ್ರಕಾಂತ ಎಂಬವರು ಪ್ರಚೋದನೆ ಮಾಡಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.