ಕಾಸರಗೋಡು : ರಸ್ತೆ ಅಪಘಾತಕ್ಕೆ ಗಾಯಾಳು ಬಲಿ

Update: 2021-09-10 10:30 GMT

ಕಾಸರಗೋಡು : ಬೈಕ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ  ಚಿಕಿತ್ಸೆ  ಪಡೆಯುತ್ತಿದ್ದ  ಕುಂಬಳೆ ನಿವಾಸಿಯೋರ್ವರು ಶುಕ್ರವಾರ ಮೃತಪಟ್ಟಿದ್ದಾರೆ.

ಶಿರಿಯ ಬತ್ತೇರಿಯ  ಮುಹಮ್ಮದ್ ( 53) ಮೃತಪಟ್ಟವರು.

ನಾಲ್ಕು  ತಿಂಗಳ ಹಿಂದೆ ರಾಷ್ಟೀಯ ಹೆದ್ದಾರಿಯ ಮುಟ್ಟಂ ಗೇಟ್  ಬಳಿಕ  ಇವರು  ಸಂಚರಿಸುತ್ತಿದ್ದ ಬೈಕ್ ಗೆ ಇನ್ನೊಂದು ಬೈಕ್ ಢಿಕ್ಕಿ ಹೊಡೆದು ಅಪಘಾತ ನಡೆದಿತ್ತು . ಗಂಭೀರ ಗಾಯಗೊಂಡ ಮುಹಮ್ಮದ್ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News