ಕಲಬುರಗಿ ಮನಪಾ: ಜಾತ್ಯತೀತರ ಬೆಂಬಲ ದೊರಕುವ ವಿಶ್ವಾಸವಿದೆ: ಮಲ್ಲಿಕಾರ್ಜುನ ಖರ್ಗೆ

Update: 2021-09-11 09:20 GMT

ಮಂಗಳೂರು, ಸೆ.11: ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಜಾತ್ಯತೀತರ ಬೆಂಬಲದೊಂದಿಗೆ ಅಧಿಕಾರಕ್ಕಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಜತೆ ಮಾತನಾಡಿದ್ದು ಹೌದು. ಅವರ ಬೆಂಬಲದ ವಿಶ್ವಾಸವಿದೆ ಎಂದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಈ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ 27 ಸ್ಥಾನ, ಜೆಡಿಎಸ್ 4 ಸ್ಥಾನ, ಪಕ್ಷೇತರ 1 ಸ್ಥಾನದಲ್ಲಿದೆ. ಎಲ್ಲಾ ಜಾತ್ಯತೀತತರು ಬಿಜೆಪಿಯ ವಿರುದ್ಧ ಇರುವುದರಿಂದ ಬೆಂಬಲ ಕೋರಲಾಗಿದೆ. ಎಲ್ಲವೂ ನಡೆಯುವುದು ವಿಶ್ವಾಸದ ಮೇಲೆ ಎಂದು ಅವರು ಹೇಳಿದರು.

ಜೆಡಿಎಸ್ ಮೇಯರ್ ಸ್ಥಾನ ಕೇಳಿದರೆ ನೀಡಲು ಸಿದ್ಧವೇ ಎಂಬ ಪ್ರಶ್ನೆಗೆ, ಅದು ಅಲ್ಲಿನ ಸ್ಥಳೀಯ ವಿಚಾರ. ಅವರು ನಿರ್ಧರಿಸುತ್ತಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News