ಉದನೆ: ಶ್ರೀ ಗಣೇಶ ಕಟ್ಟೆಗೆ ಹಾನಿ; ದೂರು ದಾಖಲು

Update: 2021-09-11 16:51 GMT

ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣಾ  ವ್ಯಾಪ್ತಿಯ ಉದನೆ ಎಂಬಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ ನಡೆದ ಗಣೇಶ ಕಟ್ಟೆಯನ್ನು  ದುಷ್ಕರ್ಮಿಗಳು ಹಾನಿಗೊಳಿಸಿದ ಘಟನೆ ಶುಕ್ರವಾರ ರಾತ್ರಿ  ನಡೆದಿದೆ.

ಶುಕ್ರವಾರ ಗಣೇಶೋತ್ಸವವು ಕೊವೀಡ್ ಕಾರಣದಿಂದಾಗಿ ಸರಳವಾಗಿ ನಡೆದು ರಾತ್ರಿ 8 ಗಂಟೆ  ಸುಮಾರಿಗೆ ವಿಸರ್ಜನಾ ಕಾರ್ಯಕ್ರಮವು ಮುಗಿದು  ಭಕ್ತಾದಿಗಳು ಸ್ಥಳದಿಂದ ನಿರ್ಗಮಿಸಿದ್ದರು. ಶನಿವಾರ ಮುಂಜಾನೆ ಸ್ಥಳಕ್ಕೆ ಭೇಟಿ ನೀಡಿದಾಗ ಗಣೇಶ ಕಟ್ಟೆಯ ಮುಂಭಾಗದ ಸಿಮೆಂಟ್ ರಚನೆಯನ್ನು ಹಾನಿಗೊಳಿಸಿರುವುದು ಕಂಡು ಬಂದಿದೆ.

ಶ್ರೀ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News