​ಕಾಸರಗೋಡು : ದೋಣಿ ಮಗುಚಿ ಮೂವರು ಮೀನುಗಾರರಿಗೆ ಗಾಯ

Update: 2021-09-12 07:23 GMT

ಕಾಸರಗೋಡು : ಮೀನುಗಾರಿಕಾ ದೋಣಿ ಮಗುಚಿ ಮೂವರು ಮೀನುಗಾರರು ಗಾಯಗೊಂಡ ಘಟನೆ ಕಿಯೂರು ಸಮುದ್ರದಲ್ಲಿ ನಡೆದಿದೆ.  

ಕಿಯೂರಿನ ಅಶ್ರಫ್ (46), ಮುನವ್ವರ್ (26) ಮತ್ತು ಅಜ್ಮಲ್ (20) ಗಾಯಗೊಂಡವರು ಎಂದು ತಿಳಿದುಬಂದಿದೆ. ಮೀನುಗಾರಿಕೆಗೆ ತೆರಳಿ ಮರಳುತ್ತಿದ್ದಾಗ ಇಂದು ಬೆಳಗ್ಗೆ ದುರಂತ ನಡೆದಿದೆ.

ಭಾರೀ ಗಾಳಿಯ ಅಬ್ಬರಕ್ಕೆ  ಸಿಲುಕಿದ ದೋಣಿ ಮಗುಚಿತು ಎಂದು ದೂರಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News