ಕಾಸರಗೋಡು : ಯುವಕನ ಕೊಲೆ ಯತ್ನ; ದೂರು

Update: 2021-09-13 15:06 GMT

ಕಾಸರಗೋಡು : ಯುವಕನೋರ್ವನ ಕೊಲೆಗೆ ಯತ್ನಿಸಿದ ಘಟನೆ ಕುಂಬಳೆ ಯಲ್ಲಿ ಸೋಮವಾರ ಸಂಜೆ  ನಡೆದಿದೆ.

ಗಂಭೀರ ಗಾಯಗೊಂಡ  ಆರಿಕ್ಕಾಡಿ ಕಡವತ್ ನ ಝೈನುದ್ದೀನ್  (30) ಎಂಬರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದು ಸಂಜೆ 7 ಗಂಟೆಯ ಸುಮಾರಿಗೆ ಕೊಡ್ಯಮ್ಮೆಯಲ್ಲಿ ಕಾರಿನಲ್ಲಿ ಬಂದ ಆರೋಪಿ ಮಾರಕಾಸ್ತ್ರದಿಂದ ಇರಿದು ಪರಾರಿಯಾಗಿರುವುದಾಗಿ ತಿಳಿದುಬಂದಿದೆ.

ಕುಂಬಳೆ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ತನಿಖೆ ನಡೆಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News