ರಕ್ತದಾನ ಜಾಗೃತಿಗಾಗಿ ಸಾಸ್ತಾನ-ತಿರುಪತಿಗೆ ಪಾದಯಾತ್ರೆ
ಕೋಟ, ಸೆ.15: ಬಾಂಧವ್ಯ ಬ್ಲಡ್ ಗ್ರೂಪ್ ಕರ್ನಾಟಕ ಸಂಸ್ಥೆಯ ಸಂಸ್ಥಾಪಕ ದಿನೇಶ್ ಬಾಂಧವ್ಯ ರಕ್ತದಾನ ಜಾಗೃತಿಗಾಗಿ ಸಾಸ್ತಾನದಿಂದ ತಿರುಪತಿ ಪಾದ ಯಾತ್ರೆ ಹೊರಟಿದ್ದಾರೆ.
ಸೆ.13ರಿಂದ ಆರಂಭಗೊಂಡ ಈ ಯಾತ್ರೆಯಲ್ಲಿ ಇವರು ರಕ್ತದಾನದ ಕುರಿತ ಪತಾಕೆಯನ್ನು ಹಿಡಿದು ಪ್ರತಿದಿನ ಸುಮಾರು 40-45 ಕಿ.ಮೀ ಕ್ರಮಿಸಲಿದ್ದಾರೆ. ಸಾಸ್ತಾನದಿಂದ ಹೊರಟು ಕೊಂಡಾಡಿ, ಹೊಸ್ಮಾರ್, ಧರ್ಮಸ್ಥಳ, ಗುಂಡ್ಯ, ಸಕಲೇಶಪುರ,ಹಾಸನ, ಶೆಟ್ಟಿ ಹಳ್ಳಿ, ಕುಣಿಗಲ್, ಯಡಿಯೂರು, ಶಿವಗಂಗೆ, ರಾಜಘಟ್ಟ, ಕೈವಾರ, ರಾಯಲ್ಪಾಡು, ವಾಯಲ್ಪಾಡು ಪಿಲೇರು, ಬಾಕ್ರಪೇಟೆ, ಶ್ರೀನಿವಾಸಮಂಗಾಪುರ, ಶ್ರಿವಾರಿ ಮೆಟ್ಟಿಲಿನಿಂದ ತಿರುಪತಿ ತಿಮ್ಮಪ್ಪನ ದರ್ಶನ ವನ್ನು ಸೆ.29ರಂದು ಮಾಡಲಿದ್ದಾರೆ.
ದಿನೇಶ್ ಬಾಂಧವ್ಯ ಈಗಾಗಲೇ ಸುಮಾರು 41 ಬಾರಿ ರಕ್ತದಾನ ಮಾಡಿದ್ದು, ಲಕ್ಷ್ಮೀನಾರಾಯಣ ರಾವ್ ಮತ್ತು ಶ್ರೀಧರ್ ಪಿ.ಎಸ್. ಪತಾಕೆ ಯನ್ನು ನೀಡುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಯೋಗೀಶ್ ದೇವಾಡಿಗ, ವಿಜಯ್ ಕುಮಾರ್, ಸಂತೋಷ್ ಕಾಂಚನ್, ಅಶೋಕ್, ಗಣೇಶ್ ಮತ್ತಿತ್ತರು ಉಪಸ್ಥಿತರಿದ್ದರು.