ಸ್ಕೂಟರ್ ಕಳವು

Update: 2021-09-15 16:52 GMT

ಮಂಗಳೂರು, ಸೆ. 15: ಮನೆಯ ಅಂಗಳದಲ್ಲಿ ನಿಲ್ಲಿಸಿಲಾಗಿದ್ದ ಸ್ಕೂಟರ್ ಕಳವಾಗಿರುವ ಘಟನೆ ಅಶೋಕನಗರ ದಡ್ಡಲಕಾಡ್ ಕ್ರಾಸ್ ಎಂಬಲ್ಲಿ ನಡೆದಿದೆ.ಪೂಜಾಶ್ರೀ ಆ.21ರಂದು ಬೆಳಗ್ಗೆ 8ಕ್ಕೆ ತನ್ನ ಮನೆಯ ಅಂಗಳದಲ್ಲಿ ಸ್ಕೂಟರ್ ನಿಲ್ಲಿಸಿಟ್ಟಿದ್ದು, ಪೂ. 11 ಗಂಟೆಯ ವೇಳೆಗೆ ನೋಡುವಾಗ ಕಳವಾಗಿತ್ತು. ಅದರ ಮೌಲ್ಯವು 45,000 ರೂ. ಎಂದು ಅಂದಾಜಿಸಲಾಗಿದೆ.

ಉರ್ವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News