ಚಟ್ಟುಂಗುಯಿ: ಮಾದಕ ದ್ರವ್ಯ ಚರಸ್ ಸಹಿತ ಓರ್ವನ ಬಂಧನ

Update: 2021-09-16 06:21 GMT

ಕಾಸರಗೋಡು, ಸೆ.16:  ಎಂಡಿಎಂಎ ಚರಸ್ ಮಾದಕ ದ್ರವ್ಯ  ಹೊಂದಿದ್ದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಕಾಸರಗೋಡು ಡಿವೈಎಸ್ಪಿ ಪಿ.ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.

ಚಟ್ಟುಂಗುಯಿ  ಹಿದಾಯತ್ ನಗರದ ಅಬ್ದುಲ್ ರಹಮಾನ್ (34) ಬಂಧಿತ ಆರೋಪಿ. ಈತನಿಂದ ಎರಡೂವರೆ ಗ್ರಾಂ ಎಂಡಿಎಂಎ  ಚರಸ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಖಚಿತ ಮಾಹಿತಿಯನ್ನು ಆಧರಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News