ದೇವಾಲಯ ಒಡೆದಿರುವುದಕ್ಕೆ ನನ್ನ ವಿರೋಧವಿದೆ: ಬಿಜೆಪಿ ರಾಜ್ಯ ವಕ್ತಾರ ಗಣೇಶ್ ಕಾರ್ಣಿಕ್
Update: 2021-09-16 10:07 GMT
ಮಂಗಳೂರು, ಸೆ.16: ಮೈಸೂರಿನಲ್ಲಿರುವ ಪುರಾತನ ದೇವಾಲಯವನ್ನು ಕದ್ದು ಮುಚ್ಚಿ ಒಡೆದಿರುವ ಕೃತ್ಯವನ್ನು ನಾನು ವೈಯಕ್ತಿಕ ವಾಗಿ ವಿರೋಧಿಸುತ್ತೇನೆ. ಈ ಬಗ್ಗೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುವುದಾಗಿ ಬಿಜೆಪಿಯ ರಾಜ್ಯ ವಕ್ತಾರ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2009ನೆ ಇಸವಿಯ ನಂತರ ಅಕ್ರಮವಾಗಿ ನಿರ್ಮಿಸಲಾದ ಧಾರ್ಮಿಕ ಕೇಂದ್ರಗಳನ್ನು ಸ್ಥಳೀಯರಿಗೆ ಮನವರಿಕೆ ಮಾಡಿ ತೆರವುಗೊಳಿಸಲು ಸುಪ್ರೀಂ ಕೋರ್ಟ್ ಆದೇಶ ನೀಡಿದೆಯೇ ಹೊರತು ಹಳೆಯ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸಲು ಸೂಚಿಸಿಲ್ಲ. ಮೈಸೂರಿನಲ್ಲಿ ದೇವಾಲಯ ಧ್ವಂಸಗೊಳಿಸಿದ್ದರ ಹಿಂದೆ ಯಾರದೋ ಹುನ್ನಾರ ಇರುವಂತೆ ತೋರುತ್ತದೆ ಎಂದು ಆರೋಪಿಸಿದ್ದಾರೆ.