ರಸ್ತೆ ಅಪಘಾತ : ಬೈಕ್ ಸವಾರ ಮೃತ್ಯು

Update: 2021-09-16 16:35 GMT

ಹೆಬ್ರಿ, ಸೆ.16: ಅತಿ ವೇಗ ಹಾಗೂ ನಿರ್ಲಕ್ಷದಿಂದ ಬಂದ ಲಾರಿ ಹಾಗೂ ಈಚರ್ ವಾಹಗಳು ಬೈಕ್ ಸವಾರನಿಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ವರಂಗ ಗ್ರಾಮದ ಕೆಲ್‌ಟೆಕ್ ಸಮೀಪದ ಬುಧವಾರ ಸಂಜೆ ನಡೆದಿದೆ. ಮೃತರನ್ನು ಬೈಕ್ ಸವಾರ ಜಿನದತ್ತ (42) ಎಂದು ಗುರುತಿಸಲಾಗಿದೆ.

ನಿನ್ನೆ ಸಂಜೆ ಆರು ಗಂಟೆ ಸುಮಾರಿಗೆ ಜಿನದತ್ತ ಅವರು ಮುನಿಯಾಲ್‌ನಿಂದ ವರಂಗದತ್ತ ಸಾಗುತಿದ್ದು, ಕೆಲ್‌ಟೆಕ್ ತಿರುವು ಬಳಿ ವೇಗವಾಗಿ ಬಂದ ಲಾರಿಯ ಹಿಂದಿನ ಚಕ್ರ ಬೈಕ್‌ಗೆ ತಾಗಿದ ಪರಿಣಾಮ ಜಿನದತ್ತ ಮೋಟಾರು ಬೈಕ್ ಸಮೇತ ರಸ್ತೆಗೆ ಉರುಳಿ ಬಿದ್ದರು. ಅದರ ಹಿಂದೆಯೇ ವೇಗವಾಗಿ ಬಂದ ಈಚರ್ ವಾಹನ, ಬೈಕ್ ಹಾಗೂ ಸವಾರರನ್ನು ಸ್ವಲ್ಪ ದೂರ ಎಳೆದುಕೊಂಡು ಹೋಗಿ ರಸ್ತೆ ಬದಿ ನಿಂತುಕೊಂಡಿತು. ತೀವ್ರವಾಗಿ ಗಾಯ ಗೊಂಡ ಜಿನದತ್ತ ಸ್ಥಳದಲ್ಲೇ ಮೃತಪಟ್ಟರು. ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News