ಬಸ್‌ನಲ್ಲಿದ್ದ ಬ್ಯಾಗ್ ಕಳವು

Update: 2021-09-16 16:37 GMT

ಉಡುಪಿ, ಸೆ.16: ಮಂಗಳೂರಿನಿಂದ ತನ್ನ ಊರಾದ ಶಿರಸಿಗೆ ಬಸ್ಸಿನಲ್ಲಿ ಪ್ರಯಾಣಿಸುತಿದ್ದ ಶಿರಸಿ ತಾಲೂಕು ಹುಲೇಕಲ್ ನಿವಾಸಿ ಮಾಧುರಿ ಮಾಧವ ಪುರಾಣಿಕ್ ಎಂಬವರ ಲ್ಯಾಪ್‌ಟಾಪ್ ಸೇರಿದಂತೆ ಪ್ರಮುಖ ದಾಖಲೆಗಳಿದ್ದ ಬ್ಯಾಗ್ ಒಂದನ್ನು ಉಡುಪಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ  ಅಪಹರಿಸಿರುವುದಾಗಿ ಉಡುಪಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಬ್ಯಾಗ್‌ನ್ನು ಬಸ್ಸಿನ ಸೀಟಿನ ಮೇಲಿಟ್ಟು ಶೌಚಾಲಯಕ್ಕೆ ಹೋಗಿ ಬಂದು ನೋಡುವಾಗ ಕಳವಾಗಿತ್ತು ಎಂದವರು ದೂರಿನಲ್ಲಿ ತಿಳಿಸಿದ್ದಾರೆ. ಉಡುಪಿ ನಗರ ಠಾಣೆ ಪೊಲೀಸರು ತನಿಖೆ ನಡೆಸುತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News