ಸೆ.19ರಂದು ಪರ್ಕಳದಲ್ಲಿ ಪ್ರತಿಭಟನೆ

Update: 2021-09-17 14:23 GMT

ಉಡುಪಿ, ಸೆ.17: ಪರ್ಕಳ ರಾ.ಹೆದ್ದಾರಿ 169ಎ ವಿಸ್ತರಣೆಯ ಸಂತ್ರಸ್ತರಿಗೆ ಶೀಘ್ರ ಪರಿಹಾರ ಬಿಡುಗಡೆ ಮಾಡಬೇಕು ಮತ್ತು ರಸ್ತೆ ಕಾಮಗಾರಿ ಪೂರ್ಣ ಗೊಳಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಸೆ.19ರಂದು ಬೆಳಗ್ಗೆ 9.30ಕ್ಕೆ ಪರ್ಕಳದ ಬಾಬುರಾಯ ಸರ್ಕಲ್ ಬಳಿ ಹಮ್ಮಿಕೊಳ್ಳಲಾಗಿದೆ.

ಈ ಪ್ರತಿಭಟನೆಯಲ್ಲಿ ಸಾರ್ವಜನಿಕರು, ವಾಹನ ಚಾಲಕರು, ಮತ್ತು ಭೂ ಸಂತ್ರಸ್ತರು ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡರಾದ ಸುಕೇಶ್ ಕುಂದರ್ ಹೆರ್ಗ, ಪರ್ಕಳ ಮೋಹನ್‌ದಾಸ್ ನಾಯಕ್, ಗಣೇಶ್‌ರಾಜ್ ಸರಳೇಬೆಟ್ಟು, ತುಳಜಾ ಉಪೇಂದ್ರ ನಾಯ್ಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News